ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚೌಡಯ್ಯ : ತಾತನ ಹೆಸರಲ್ಲಿ ಅಂಬರೀಷ್ (Choudayya | Ambarish | S. Narayan | Veera parampare)
PR
'ಇನ್ನು ಸ್ವಲ್ಪ ದಿನ ತಾಳಿ, ಒಳ್ಳೆ ಸುದ್ದಿ ಕೊಡ್ತೀನಿ. ಅದೊಂದು ದೊಡ್ಡ ಪ್ರಾಜೆಕ್ಟ್. ನನಗೊಂದು ಸ್ಪೆಷಲ್ ಸಿನಿಮಾ ಕೂಡಾ..' -ಹೀಗೆ ಕೆಲವು ದಿನಗಳ ಹಿಂದೆಯಷ್ಟೇ ರೆಬೆಲ್ ಸ್ಟಾರ್ ಅಂಬರೀಷ್ ಹೇಳಿಕೊಂಡಿದ್ದರು.

ಆದರೆ ಅದು ಯಾವ ಚಿತ್ರ ? ಯಾರು ನಿರ್ದೇಶಕರು? ಯಾವಾಗ ಚಿತ್ರೀಕರಣ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಂಬರೀಷ್ ಅವರ ನಗು ಹೊರತಾಗಿ ಬೇರೇನೂ ಉತ್ತರ ಸಿಕ್ಕಿರಲಿಲ್ಲ.

ಈಗ ಆ ಎಲ್ಲ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. ಹೌದು. ಅಂಬರೀಷ್ ಹೊಸ ಚಿತ್ರವೊಂದಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರವನ್ನು ನಿರ್ದೇಶಿಸುವವರು ಎಸ್. ನಾರಾಯಣ್. 'ವೀರ ಪರಂಪರೆ' ಮೂಲಕ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಅಂಬಿ ಇದೀಗ ಅದಕ್ಕಿಂತಲೂ ವಿಶೇಷ ಎನಿಸುವಂಥ ಚಿತ್ರ ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ಇಲ್ಲಿನ ವಿಶೇಷ.

ಎಸ್. ನಾರಾಯಣ್ ಅವರು ಅಂಬರೀಷ್‌ಗಾಗಿಯೇ ಕಥೆ, ಚಿತ್ರಕಥೆ, ಸಂಭಾಷಣೆ ಸಿದ್ಧಪಡಿಸಿ ನಿರ್ದೇಶಿಸಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಚೌಡಯ್ಯ' ಎಂದು ನಾಮಕರಣ ಮಾಡಿದ್ದಾರೆ.

ಈ ಶೀರ್ಷಿಕೆ ಕೇಳಿದಾಕ್ಷಣ ಅಂಬರೀಷ್ ಅವರ ತಾತ ಪೀಟೀಲು ಚೌಡಯ್ಯನವರ ನೆನಪಾಗದೆ ಇರದು. ಆದರೆ ಈ ಚಿತ್ರದಲ್ಲಿ 'ಚೌಡಯ್ಯ' ಎಂಬುದು ಭಿನ್ನ ಪಾತ್ರವೊಂದರ ಹೆಸರಷ್ಟೇ ಆಗಿದೆ. ಪೀಟೀಲು ಚೌಡಯ್ಯ ಅವರಿಗೆ ಸಂಬಂಧಿಸಿದ ಯಾವ ಅಂಶಗಳೂ ಚಿತ್ರದಲ್ಲಿ ಇರುವುದಿಲ್ಲವಂತೆ.

ತಾತನ ಹೆಸರನ್ನಷ್ಟೇ ಮೊಮ್ಮಗನಿಗೆ ಇಟ್ಟು ಚಿತ್ರ ಮಾಡಲು ಹೊರಟಿರುವ ನಾರಾಯಣ್ ಈಗಾಗಲೇ ಚಿತ್ರದ ಸಕಲ ಸಿದ್ಧತೆಗನ್ನೂ ಪೂರೈಸಿದ್ದಾರೆ. ಸದ್ಯಕ್ಕೆ ಇಷ್ಟೇ ಸುದ್ದಿ. ಚಿತ್ರದ ತಾರಾ ಬಳಗದಲ್ಲಿ ಯಾರ್ಯಾರು ಇರುತ್ತಾರೆ ಎಂಬ ಮಾಹಿತಿಯೂ ಸದ್ಯಕ್ಕಿಲ್ಲ.

ಎಲ್ಲವೂ ಅಂದುಕೊಂಡಂತೆ ನಡೆದರೆ 'ಚೌಡಯ್ಯ'ನಿಗೆ ಶೀಘ್ರದಲ್ಲೇ ಮುಹೂರ್ತ ಜರುಗಲಿದೆ.
ಇವನ್ನೂ ಓದಿ