ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಹ್ಯಾಪಿ ಬರ್ತ್‌ಡೇ ಗಣೇಶ್!
ತಾರಾ ಪರಿಚಯ
Feedback Print Bookmark and Share
 
ರವಿಪ್ರಕಾಶ್ ರೈ (ನ್ಯೂಸ್ ರೂಮ್)
NRB
ಚಿತ್ರರಂಗವೆಂದರೆ ಅಲ್ಲಿ ರಾಜಕೀಯ, ಕಾಲೆಳೆಯುವವರ ಸಂಖ್ಯೆ ಬೇಕಾದಷ್ಟಿರುತ್ತದೆ. ಗಾಡ್ಫಾದರ್ ಇಲ್ಲದೇ ಈ ರಂಗದಲ್ಲಿ ಮಿಂಚುವುದೆಂದರೆ ನಿಜಕ್ಕೂ ಅದೊಂದು ಅದ್ಭುತ ಸಾಧನೆ. ಆ ಸಾಧನೆಯನ್ನು ನಮ್ಮ 'ಮಳೆ' ಹುಡುಗ ಗಣೇಶ್ ಮಾಡಿದ್ದಾರೆ. ಈ ಹುಡುಗ ಇಂದು (ಜು.2) ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಗಾರು ಮಳೆ ಚಿತ್ರ ಬಿಡುಡೆಯಾದ ನಂತರ ಗಣೇಶ್ ಆಚರಿಸಿಕೊಳ್ಳುತ್ತಿರುವ ಎರಡನೇ ಹುಟ್ಟುಹಬ್ಬ ಇದು. ಎರಡು ವರ್ಷದಲ್ಲಿ ಅವರು ನಡೆದು ಬಂದ ಹಾದಿಯನ್ನು ವಿಶ್ಲೇಷಿಸಿದರೆ ನಿಜಕ್ಕೂ ನೆಮ್ಮದಿಯ ನಿಟ್ಟುಸಿರು ಹೊರಚೆಲ್ಲಬಹುದು.

ನೆಲಮಂಗಲದ ಅಡಕಮಾರನಹಳ್ಳಿ ಎಂಬ ಒಂದು ಸಣ್ಣ ಹಳ್ಳಿಯಿಂದ ಕೈಯಲ್ಲಿ ಒಂದಿಷ್ಟು ಪುಡಿಗಾಸು ಇಟ್ಟುಕೊಂಡು ಉದ್ಯಾನನಗರಿಗೆ ಬಂದು ಸೈಕಲ್ ಹೊಡೆದ ಈ ಹುಡುಗ ಈಗ ಕೋಟಿ ವೀರ. ಗಣೇಶ್ ಏಕಾಏಕಿ ಏನೋ ಗಿಮಿಕ್ ಮಾಡಿ ಚಿತ್ರರಂಗದಲ್ಲಿ ಬೆಳೆದಿಲ್ಲ. ಅದಕ್ಕಾಗಿ ಸಾಕಷ್ಟು ಅವಮಾನಗಳನ್ನು ನಗುತ್ತಲೇ ನುಂಗಿದ್ದಾರೆ. ಅನೇಕರ ಟೀಕೆಗಳನ್ನು ಸಹಿಸಿದ್ದಾರೆ.

ತನಗೊಂದು ಪಾತ್ರ ಕೊಡಿ ಎಂದು ಕೇಳಿದಾಗ, 'ನೀ ನಾಲಾಯಕ್ಕು' ಎಂದ ಮಂದಿ ಇಂದು ಆ ಹುಡುಗನ ಸುತ್ತ ಮುಗೀಬೀಳುತ್ತಿದ್ದಾರೆ. ಗಣೇಶ್ ಪ್ರತಿ ಸಾಧನೆಯ ಹಾದಿಯಲ್ಲಿ ಶ್ರಮವಿದೆ, ಶ್ರದ್ದೆಯಿದೆ. ತಾನು ಬೆಳೆಯಬೇಕು. ಚಿತ್ರರಂಗ ನನ್ನನ್ನು ಗುರುತಿಸಬೇಕು ಎಂದು ಪಣತೊಟ್ಟು ಮಾಡಿದ ಕೆಲಸಗಳ ಪ್ರತಿಫಲ ಇಂದು ಇವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.
NRB


ಈ ಹುಡುಗನ ಸಾಧನೆಗೆ ಸಾಥ್ ನೀಡಿದ್ದು, ಉದಯ ಟಿವಿಯ 'ಕಾಮಿಡಿ ಟೈಮ್' ಕಾರ್ಯಕ್ರಮ. ಗಣೇಶ್ ಅದನ್ನೇ ತಮ್ಮ ಸಾಧನೆಯ ಮೆಟ್ಟಿಲನ್ನಾಗಿಸಿದರು. ಪರಿಣಾಮ ಸಂಜೆ 5 ಗಂಟೆಯಾಗುತ್ತಿದ್ದಂತೆ ಕರ್ನಾಟಕದ ಜನತೆ ಉದಯ ಟಿ.ವಿಯ ಈ ಕಾರ್ಯಕ್ರಮಕ್ಕಾಗಿ ಎದುರು ನೋಡಲಾರಂಭಿಸಿದರು. ಅಂದು ಗಣೇಶ್ ಹೊಟ್ಟೆಪಾಡು ಹಾಗೂ ತನ್ನ ಅಭಿನಯದ ಹುಚ್ಚಿಗಾಗಿ ಸಾಧನೆ, ಅಂಕುರ, ಪಂಚಾಮೃತ, ಪ್ರೇಮ ಕಥೆಗಳು, ಸಮಾಗಮ, ಭಾಗ್ಯ, ಯದ್ವಾತದ್ವಾ, ಪಾ.ಪ.ಪಾಂಡು ಧಾರವಾಹಿಗಳಲ್ಲೂ ನಟಿಸಿ ತಕ್ಕ ಮಟ್ಟಿನ ಜನಪ್ರಿಯತೆ ಗಳಿಸಿದರು.

ಇವರು ನಟಿಸಿದ 'ಠಪೋರಿ' ಚಿತ್ರ ಸೋತ ನಂತರ ಹಿರಿತೆರೆಯ ಭಾಗ್ಯ ತನಗಿಲ್ಲ ಎಂದು ಮತ್ತೆ ಧಾರಾವಾಹಿ ಕಡೆಗೆ ಮುಖ ಮಾಡಿದರು. ಆದರೆ ಮತ್ತೆ ಇವರಿಗೆ 'ಕೌನ್ ಬನೇಗಾ ಕರೋಡ್ ಪತಿ' ಚಿತ್ರದ ನಾಲ್ಕು ಮಂದಿ ನಾಯಕರಲ್ಲಿ ಒಬ್ಬ ನಾಯಕನಾಗಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡರು. ನಂತರ ಅವರಿಗೆ ಗೇಮ್ಸ್, ಡ್ರಿಮ್ಸ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು ಸಿಕ್ಕವು. ಪಾಲಿಗೆ ಬಂದ್ದದೇ ಪಂಚಾಮೃತ ಎಂದು ನಟಿಸಿ ಮೌನಿಯಾಗಿರುತ್ತಿದ್ದರು.
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಲ್ಡನ್‌ಸ್ಟಾರ್ ಗಣೇಶ್, ಮುಂಗಾರು ಮಳೆ, ಹುಟ್ಟುಹಬ್ಬ