ಸತ್ಯಂ ಕಂಪ್ಯೂಟರ್ ವಹಿವಾಟಿನಿಂದ ಕುಸಿತ ಅನುಭವಿಸದೇ ವಂಚನೆಯಿಂದ ಕುಸಿತಗೊಂಡಿದೆ ಎಂದು ಕೇಂದ್ರ ಗೃಹಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ದೇಶದಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರಮುಖ ಬ್ಯಾಂಕ್ಗಳು ನಷ್ಟ ಅನುಭವಿಸಿಲ್ಲ ಅಥವಾ ಯಾವುದೇ ಬ್ಯಾಂಕ್ಗಳು ದಿವಾಳಿಯಾಗಿಲ್ಲ.ಪ್ರಸಕ್ತ ವರ್ಷ ಜಗತ್ತಿಗೆ ಹೀನಾಯ ಸ್ಥಿತಿಯಾದರೇ ಭಾರತಕ್ಕೆ ಅಲ್ಪಕಷ್ಟದ ವರ್ಷವಾಗಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ. 2008-09 ರ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7 ರಷ್ಟಾಗಲಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳು ಸುಮಾರು 60 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವಂಚನೆ ಪ್ರಕರಣಗಳು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುತ್ತವೆ. ಆದರೆ ಸತ್ಯಂ ವಂಚನೆಯನ್ನು ವ್ಯವಸ್ಥಾಪನಾ ಮಂಡಳಿ ಅಥವಾ ಅಡಳಿತ ಮಂಡಳಿ ಮತ್ತು ಲೆಕ್ಕಪರಿಶೋಧಕರಿಂದ ಕೂಡಾ ಪತ್ತೆ ಮಾಡಲು ಸಾಧ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ. |