ಆಹಾರ ಧಾನ್ಯಗಳ ಸರಬರಾಜು ಅಡ್ಡಿ ಆತಂಕಗಳು ದೂರವಾದ ಹಿನ್ನೆಲೆಯಲ್ಲಿ, ಸತತ ನಾಲ್ಕನೇ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಅಕ್ಟೋಬರ್ 30ಕ್ಕೆ ವಾರಂತ್ಯಗೊಂಡಂತೆ ಶೇ.12.30ಕ್ಕೆ ಇಳಿಕೆಯಾಗಿದೆ.
ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.12.85ಕ್ಕೆ ತಲುಪಿತ್ತು ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಗೋಧಿ, ದ್ವಿದಳ ಧಾನ್ಯ ಮತ್ತು ಆಲೂಗಡ್ಡೆ ದರಗಳಲ್ಲಿ ಇಳಿಕೆಯಾಗಿದ್ದು, ಈರುಳ್ಳಿ ದರ ವಾರಂತ್ಯದೊಳಗೆ ಶೇ.10ರಷ್ಟು ಏರಿಕೆಯಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.12.59ರಷ್ಟಾಗಿತ್ತು,ಇದೀಗ ಆಗಾರ ಹಣದುಬ್ಬರ ದರದಲ್ಲಿ ಅಲ್ಪ ಸುಧಾರಣೆಯಾಗಿದೆ ಎಂದು ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು, ಭಾರತೀಯ ರಿಸರ್ವ್ ಬ್ಯಾಂಕ್ ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದರಿಂದ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಏತನ್ಮಧ್ಯೆ, ಮುಂಗಾರು ಮಳೆ ಉತ್ತಮವಾಗಿದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಗಳಿವೆ. ಉತ್ಪಾದನೆ ಹೆಚ್ಚಾದಲ್ಲಿ ದರಗಳಲ್ಲಿ ಇಳಿಕೆಯಾಗಲಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಸಲಹಾ ಸಮಿತಿ ವಿವರಣೆ ನೀಡಿದೆ.