ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಹಿಂಸೆಯ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಅಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ವಿದ್ಯಾರ್ಧಿಗಳಿಗೆ ಸೂಕ್ತ ರೀತಿಯ ಭದ್ರತೆ ನೀಡಬೇಕಂದು ಕೋರಿದ್ದು, ಆ ಪ್ರಕಾರ ಆಸ್ಟ್ರೇಲಿಯ ಸರಕಾರದಿಂದ ಭರವಸೆಯನ್ನು ಪಡೆದಿದೆ. ಇದೇ ವೇಳೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಜನಾಂಗೀಯ ದಾಳಿಯ ಹಿನ್ನಲೆಯಲ್ಲಿ ಆಸ್ಟೇಲಿಯಾ ಪ್ರಧಾನಿ ಕೆವಿನ್ ರುಡ್ ಕ್ಷಮೆಯನ್ನು ಕೋರಿದ್ದಾರೆ.
|