ಪಾಕಿಸ್ತಾನ ವಾಯವ್ಯ ಕಣಿವೆ ಪ್ರಾಂತ್ಯದ ಕೊಹಾಟ್ ಪಟ್ಟಣದಲ್ಲಿ ಜನದಟ್ಟಣೆಯ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ನಾಲ್ವರು ವ್ಯಕ್ತಿಗಳು ಅಸುನೀಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ತೇರಾ ಬಜಾರ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನ ಸೇನೆಯು ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿದ ಬಳಿಕ ಉಗ್ರಗಾಮಿಗಳು ಸರಣಿ ಭಯೋತ್ಪಾದನೆ ದಾಳಿಗಳನ್ನು ನಡೆಸಿ ತಲ್ಲಣ ಸೃಷ್ಟಿಸಿದ್ದಾರೆ.
ಸೇನೆಯ ವಿರುದ್ಧ ಸೋಲಿನ ಸುಳಿಗೆ ಸಿಕ್ಕಿದ ತಾಲಿಬಾನಿಗಳು ನಗರಗಳ ಮೇಲೆ ದಾಳಿ ಮೂಲಕ ಪಾಕ್ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.ಸ್ಫೋಟದ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳ ಮತ್ತು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ತಪಾಸಿಸಿದ್ದು, ಯಾವುದೇ ಗುಂಪು ಜವಾಬ್ದಾರಿ ಹೊತ್ತಿಲ್ಲ.
ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಸ್ಫೋಟವನ್ನು ಖಂಡಿಸಿದ್ದು, ಸರ್ಕಾರ ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರದಿಂದ ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿ ತಿಳಿಸಿದ್ದಾರೆ. |