ತಮಿಳು ಬಂಡುಕೋರರನ್ನು ಬೆಂಬಲಿಸುತ್ತಿರುವ ಆರೋಪದಲ್ಲಿ ಶ್ರೀಲಂಕಾ ಆಗಮಮಿಸಿದ ಕೆನಡಾದ ಸಂಸದರೊಬ್ಬರನ್ನು ಬುಧವಾರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾದಿಂದ ಆಗಮಿಸಿರುವ ಸಂಸದರನ್ನು ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ತಪಾಸಣೆ ನಡೆಸಿದ ನಂತರ ಅವರನ್ನು ಗಡಿಪಾರು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ದೇಶಕ್ಕೆ ಆಗಮಿಸಿರುವ ಕೆನಡಾದ ಸಂಸದ ತಮಿಳು ಟೈಗರ್ಸ್ ಬೆಂಬಲಿಗರಾಗಿದ್ದಾರೆ ಆ ನಿಟ್ಟಿನಲ್ಲಿ ಅವರಿಗೆ ದೇಶದೊಳಕ್ಕೆ ಪ್ರವೇಶ ಇಲ್ಲ ಎಂದಿರುವ ಅಧಿಕಾರಿ ಬಂಧಿತ ಸಂಸದರ ಹೆಸರನ್ನು ಹೇಳಲು ನಿರಾಕರಿಸಿದರು. ಆದರೆ ಬಂಧಿತ ಸಂಸದರನ್ನು ತಕ್ಷಣಕ್ಕೆ ಗಡಿಪಾರು ಮಾಡಿಲ್ಲ ಎಂದು ಹೇಳಿದರು.
1980ರಲ್ಲಿ ಸುಮಾರು 300,00ಮಂದಿ ತಮಿಳರು ಕೆನಾಡಕ್ಕೆ ವಲಸೆ ಹೋಗಿದ್ದರು. ಶ್ರೀಲಂಕಾ ಸರ್ಕಾರ ಎಲ್ಟಿಟಿಇ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕೆನಾಡದಲ್ಲಿ ಲಂಕಾ ವಿರುದ್ಧ ತಮಿಳರು ಭಾರೀ ಪ್ರತಿಭಟನೆ ನಡೆಸಿದ್ದರು. |