ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆಗೆ ರಾಜೀನಾಮೆ ನೀಡಿದ ಮಲ್ಹೋತ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಗೆ ರಾಜೀನಾಮೆ ನೀಡಿದ ಮಲ್ಹೋತ್ರಾ
ಇಲ್ಲಿನ ಗ್ರೇಟರ್ ಕೈಲಾಸ್ ವಿಧಾನಸಭಾ ಸ್ಥಾನದಲ್ಲಿ ಗೆದ್ದು ಬಂದಿರುವ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ವಿ.ಕೆ.ಮಲ್ಹೋತ್ರಾ ತನ್ನ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಉಪನಾಯಕರಾಗಿರುವ ಮಲ್ಹೋತ್ರಾ ಅವರು ತಮ್ಮ ಈ ನಿರ್ಧಾರವನ್ನು ಸ್ಪೀಕರ್ ಸೋಮನಾಥ ಚಟರ್ಟಿಯವರಿಗೆ ಒಂದು ಗೆರೆಯ ಪತ್ರದ ಮೂಲಕ ತಿಳಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ವೇಳೆಗೆ ಇವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಾಗಿತ್ತು. ಆದರೆ ಬಿಜೆಪಿಯು ಚುನಾವಣೆಯಲ್ಲಿ ಅಧಿಕಾರ ವಹಿಸಲು ಸೋತಿಯಾದರೂ, ವೈಯಕ್ತಿಕವಾಗಿ ಮಲ್ಹೋತ್ರಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

ತನ್ನ ವಿಧಾನಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

"ದಕ್ಷಿಣ ದೆಹಲಿಯ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ. ನಾನು ಗ್ರೇಟರ್ ಕೈಲಾಸ್ ಕ್ಷೇತ್ರದ ತನ್ನ ಜನತೆಗಾಗಿ ಕಾರ್ಯನಿರ್ವಹಿಸುತ್ತೇನೆ. ಅವರು ತನ್ನ ಶಾಸಕನಾಗಿ ಆರಿಸುವ ಮೂಲಕ ನನ್ನ ಮೇಲೆ ವಿಶ್ವಾಸ ತೋರಿದ್ದಾರೆ" ಎಂದು ಮಲ್ಹೋತ್ರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಮೇಲೆ ದಂಡೆತ್ತಿ ಹೋಗುವ ಇರಾದೆ ಭಾರತಕ್ಕಿಲ್ಲ
ರಾಷ್ಟ್ರೀಯ ತನಿಖಾ ಮಂಡಳಿ: ಕೊನೆಗೂ ಯುಪಿಎ ಅಸ್ತು
ಅಜ್ಮಲ್ ಪರ ವಾದಕ್ಕೆ ಸಿದ್ಧ: ವಕೀಲನ ಕಚೇರಿಯಲ್ಲಿ ದಾಂಧಲೆ
ಒಬಿಸಿ ಆದಾಯ ಮಿತಿ ಏರಿಕೆ: ಕೇಂದ್ರಕ್ಕೆ ಸು.ಕೋ ನೋಟೀಸು
ವಿಷ್ಣುವಿಗೆ ಪ್ರದಕ್ಷಿಣೆ ಹಾಕುತ್ತಿರುವ ವರಾಹ
ವೀರ ಯೋಧರ ಕುಟುಂಬಕ್ಕೆ ರಾಮ್‌ದೇವ್‌ರಿಂದ 5 ಲಕ್ಷ