ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಜಯ್‌ಗೆ ಇಚ್ಚೆಇಲ್ಲವಾದರೆ ಒತ್ತಾಯವಿಲ್ಲ: ಅಮರ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಜಯ್‌ಗೆ ಇಚ್ಚೆಇಲ್ಲವಾದರೆ ಒತ್ತಾಯವಿಲ್ಲ: ಅಮರ್ ಸಿಂಗ್
PTI
ಸಂಜಯ್ ದತ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಇಷ್ಟವಿಲ್ಲದಿದ್ದರೆ, ಅವರನ್ನು ಒತ್ತಾಯಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.

ತಾನು ಸಂಜಯ್ ದತ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿರುವ ಸಿಂಗ್, "ಚುನಾವಣೆಯಲ್ಲಿ ಸ್ಫರ್ಧಿಸುವ ಕುರಿತು ತಾನು ಇನ್ನಷ್ಟೆ ಯೋಚಿಸಬೇಕಿದೆ ಎಂದು ಹೇಳಿರುವ ಹಳೆಯ ದೃಶ್ಯಾವಳಿಗಳನ್ನೆ ಟಿವಿ ವಾಹಿನಿಗಳು ತೋರಿಸುತ್ತಿವೆ" ಎಂದು ನಟ ತನಗೆ ತಿಳಿಸಿದ್ದಾಗಿ ಹೇಳಿದ್ದಾರೆ.

ಇಲ್ಲ ಅದು ಇತ್ತೀಚಿನ ದೃಶ್ಯಗಳು ಎಂದು ಹೇಳಿದಾಗ, ಸಂಜಯ್ ತನ್ನೊಂದಿಗೆ ಶನಿವಾರ ಲಕ್ನೋದಲ್ಲಿ ಇರಲಿದ್ದಾರೆ. ನೀವು ಅವರನ್ನು ವಿಚಾರಿಸಬಹುದು ಎಂದು ಹೇಳಿದ ಸಿಂಗ್, ಸಂಜಯ್ ಜತೆ ಸಮಾಲೋಚನೆ ನಡೆಸದೆ ಅವರ ಅಭ್ಯರ್ಥಿತನವನ್ನು ಘೋಷಿಸುವುದಿಲ್ಲ ಎಂದು ಹೇಳಿದ್ದಾರೆ.
PTI

"ಅವರೊಂದಿಗೆ ಸಮಾಲೋಚನೆ ನಡೆಸದೆ ಅವರ ಅಭ್ಯರ್ಥಿತನವನ್ನು ಘೋಷಿಸಲು ತಾನೊಬ್ಬ ಮೂರ್ಖನಲ್ಲ. ಆದರೆ ಅವರಿಗೆ ಸ್ಫರ್ಧಿಸುವುದು ಇಚ್ಚೆ ಇಲ್ಲವೆಂದಾದರೆ ಅವರನ್ನು ಒತ್ತಾಯಿಸುವುದಿಲ್ಲ" ಎಂದು ಸಮಾಜವಾದಿ ಮುಖಂಡ ಹೇಳಿದ್ದಾರೆ.

ಇದಕ್ಕೆ ಮುಂಚಿತವಾಗಿ ಸಂಜಯ್ ರಾಜಕೀಯಕ್ಕೆ ಸೇರುವ ಕುರಿತು ತಾನಿನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದರು.

ಸಂಜಯ್ ಹಾಗೂ ಅವರ ಸಹೋದರಿ ಪ್ರಿಯಾದತ್ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ ಎಂದು ಸುದ್ದಿಯಾದ ಬಳಿಕ ಸಂಜಯ್ ಹೇಳಿಕೆ ಹೊರಬಿದ್ದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಫ್‌ಬಿಐನಿಂದ ಉಗ್ರರ ಪ್ರತ್ಯಕ್ಷದರ್ಶಿಯ ವಿಚಾರಣೆ
ಸ್ವದೇಶಕ್ಕೆ ಮರಳಿದ ರಹಮಾನ್
ಅಮೆರಿಕಕ್ಕೆ ತೆರಳಿದ ಅನಿತಾ?
ಮುಂಬೈ ದಾಳಿ: ನಿಲುವು ಬದಲಿಸಿತೇ ಭಾರತ?
ರಾಜೀವ್‌ ಹತ್ಯಾ ತನಿಖಾಧಿಕಾರಿ ಎನ್ಐಎ ಮುಖ್ಯಸ್ಥ
ಮರಾಡ್ ನರಮೇಧ: 62 ಮಂದಿಗೆ ಜೀವಾವಧಿ