ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋಲ್ಕತಾ: ತಾಯಿ-ಮಗುವಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಲ್ಕತಾ: ತಾಯಿ-ಮಗುವಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಇಲ್ಲಿನ ಧಾನಿಯಾಖಾಲಿ ಗ್ರಾಮದಲ್ಲಿ ಸಿಪಿಐ ಮುಖಂಡರೊಬ್ಬರ ಪತ್ನಿ ಹಾಗೂ ಮಗುವನ್ನು ಮನೆಯಿಂದ ಹೊರಗೆಳೆದು ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಭಾನುವಾರ ನಡೆದಿದ್ದು, ಸಹಾಯಕ್ಕಾಗಿ ಅಂಗಲಾಚಿ ಮಗು ಸಾವನ್ನಪ್ಪಿದ್ದರೆ, ತಾಯಿ ಸುಟ್ಟಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಈ ದುಷ್ಕೃತ್ಯವನ್ನು ಜಾರ್ಖಂಡ್ ದಿಸೋಮ್ ಪಾರ್ಟಿ (ಜೆಡಿಪಿ) ಮಾಡಿರುವುದಾಗಿ ಸ್ಥಳೀಯ ಸಿಪಿಎಂ ಘಟಕ ಗಂಭೀರವಾಗಿ ಆರೋಪಿಸಿದ್ದು, ಘಟನೆಯನ್ನು ಖಂಡಿಸಿ ಮಂಗಳವಾರ ಧಾನಿಯಾಖಾಲಿ ಬಂದ್‌ಗೆ ಕರೆ ನೀಡಿದೆ.

ಭಾನುವಾರ ಸಂಜೆ ಸುಮಾರು 15ಮಂದಿ ಶಸ್ತ್ರ ಸಜ್ಜಿತ ತಂಡವೊಂದು ಸ್ಥಳೀಯ ಗೋಬಾರ್ ಆರಾ ಗ್ರಾಮ್ ಪಂಚಾಯ್ತಿ ಸಮಿತಿಯ ಸದಸ್ಯ ಲೋಂಚೋ ಮಾಂಡಿ ಮನೆಯೊಳಕ್ಕೆ ನುಗ್ಗಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿ ಮಾಂಡಿ ಪತ್ನಿ ಜಾರ್ನಾ (22ವ) ಹಾಗೂ ಪುಟ್ಟ ಮಗು ಸುಮನಾ ಮಾತ್ರ ಇದ್ದಿದ್ದು, ದುಷ್ಕರ್ಮಿಗಳು ಅವರಿಬ್ಬರ ಮೇಲೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿತ್ತು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮಗು ಸಹಾಯಕ್ಕಾಗಿ ಅಂಗಲಾಚುತ್ತಲೇ ಅಸು ನೀಗಿತ್ತು, ಆದರೆ ಜಾರ್ನಾ ದೇಹ ಶೇ.70ರಷ್ಟು ಸುಟ್ಟುಹೋಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒರಿಸ್ಸಾ: ರೈಲು-ಜೀಪ್ ಡಿಕ್ಕಿ-ವಧು ಸೇರಿ 14ಸಾವು
ಲೈಲಾ -ಮಜ್ನು ಗೋರಿ ರಾಜಸ್ತಾನದಲ್ಲಿ!
26/11-ಪಾಕ್‌ಗೆ ಮಾಹಿತಿ ನೀಡಲು ಭಾರತ ಸಿದ್ದ: ಪ್ರಣಬ್
ಯುಪಿಎ ಸ್ವಿಸ್ ಬ್ಯಾಂಕ್ ಖಾತೆದಾರರ ವಿವರ ಪಡೆಯಲಿ: ಸಿಪಿಎಂ
ಕಸಬ್ ವಿರುದ್ಧ 10 ಸಾವಿರ ಪುಟಗಳ ಆರೋಪ ಪಟ್ಟಿ!
ಮುಷ್ಕರ ಕೈಬಿಡದಿದ್ರೆ ಉಪವಾಸ ಮಾಡ್ತೇನೆ: ಕರುಣಾನಿಧಿ