ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್
ಕೇಂದ್ರ ಅಸ್ಸಾಮಿನ ಅಂಗ್ಲಾಂಗ್ ಜಿಲ್ಲೆಯ ಕರ್ಬಿ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಶಕ್ತಿಶಾಲಿ ಬಾಂಬು ಸ್ಫೋಟಗೊಂಡ ಘಟನೆ ಗುರುವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಸಂಭವಿಸಿದೆ. ಬಾಂಬನ್ನು ದೆಲ್ಲಿ-ದಿಬ್ರುಗರ್ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ಗುರಿಯಾಗಿ ಈ ಬಾಂಬ್ ಇರಿಸಲಾಗಿತ್ತು. ಅದೃಷ್ಟವಶಾತ್ ಸ್ಫೋಟದಿಂದ ಯಾರಿಗೂ ಹಾನಿಯಾಗಲಿಲ್ಲ.

ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿ ಮಧ್ಯರಾತ್ರಿ 1.10ರ ವೇಳೆಗೆ ಬಾಂಬ್ ಸ್ಫೋಟಗೊಂಡಿದೆ. ಹಳಿ ಪರೀಕ್ಷೆಯ ಭದ್ರತಾ ಎಸ್ಕಾರ್ಟ್ ಎಂಜಿನ್ ಈ ಪ್ರದೇಶವನ್ನು ದಾಟಿದ ತಕ್ಷಣ ಬಾಂಬ್ ಸ್ಫೋಟಗೊಂಡಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆಗಮನಕ್ಕೆ ಮುಂಚಿವಾಗಿ ಈ ಭದ್ರತಾ ಪರೀಕ್ಷೆ ಮಾಡಲಾಗಿತ್ತು. ಸ್ಫೋಟದ ವೇಳೆ ಹಳಿಯಲ್ಲಿ ಎರಡೂವರೆ ಅಡಿ ಆಳದ ಗುಳಿ ಬಿದ್ದಿದೆ.

ಡಿಎಸ್‌ಪಿ ಕೆ.ಕೆ. ಶರ್ಮಾ ಮತ್ತು ರಾಜ್‌ಪುಟಾಣ ರೈಫಲ್ಸ್‌ನ ಹಿರಿಯ ಅಧಿಕಾರಿಗಳು ಸ್ಫೋಟ ಸ್ಥಳಕ್ಕೆ ಧಾವಿಸಿದ್ದು, ಹಳಿಯಲ್ಲಿ ಇನ್ನೊಂದು ಶಕ್ತಿಶಾಲಿ ಸ್ಫೋಟಕ (ಐಇಡಿ) ಪತ್ತೆಮಾಡಿದ್ದಾರೆ. ಈ ಸಜೀವ ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರೀಯಗೊಳಿಸಲಾಗಿದೆ.

ಈ ಕೃತ್ಯವನ್ನು ಕಬ್ರಿ ಲೊಂಗ್ರಿ ನ್ಯಾಶನಲ್ ಲಿಬರೇಶನ್ ಫ್ರಂಟ್(ಕೆಎನ್ಎಲ್ಎಫ್) ನಡೆಸಿರುವುದಾಗಿ ಶಂಕಿಸಲಾಗಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯು ಐದಂಶದ ಸನ್ನದನ್ನು ಸಲ್ಲಿಸಿದ್ದು, ತಮ್ಮ ನಿಲುವೇನು ಸ್ಪಷ್ಟಪಡಿಸಲು ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣವಂತನಾಗಲು ಹೆತ್ತ ಮಗಳಮೇಲೆ ಅತ್ಯಾಚಾರ!
ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್
ಅಡ್ವಾಣಿ ವಿರುದ್ಧ ಸ್ಫರ್ಧೆಗೆ ಮಲ್ಲಿಕಾ ಸಾರಾಭಾಯಿ
ಪಶ್ಚಿಮ ಬಂಗಾಲ: ಸೈಕಲ್‌ಬಾಂಬ್‌ ಸ್ಫೋಟಕ್ಕೆ ಎರಡು ಬಲಿ
ವರುಣ್ ಹೇಳಕೆ: ಬಿಜೆಪಿಯೊಳಗೆ ಎರಡು ಧ್ವನಿ
ಆರ್‌ಜೆಡಿಗೆ ಕಾಂಗ್ರೆಸ್ ತಿರುಗೇಟು: ಹೊಂದಾಣಿಕೆ ಸಾಧ್ಯವಿಲ್ಲ