ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಶ್ವಾಸಘಾತುಕರಿಂದ ಧಕ್ಕೆ ಆಗಲ್ಲ: ಕರುಣಾನಿಧಿ ವಾಗ್ದಾಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಘಾತುಕರಿಂದ ಧಕ್ಕೆ ಆಗಲ್ಲ: ಕರುಣಾನಿಧಿ ವಾಗ್ದಾಣ
PTI
ತಮಿಳು ಹುಲಿಗಳ ಪರವಾಗಿ ತಮಿಳುನಾಡು ಮುಖ್ಯಮಂತ್ರಿ ಕರೆನೀಡಿದ ಬಂದ್‌ಗೆ ಎಐಎಡಿಎಂಕೆ ಬೆಂಬಲ ನೀಡದಿದ್ದುದಕ್ಕೆ ಕರುಣಾನಿಧಿ ತಮ್ಮ ತಮಿಳು ಪರ ಹೋರಾಟ ಕೆಲವು ವಿಶ್ವಾಸಘಾತುಕರಿಂದ ನಮ್ಮ ಹೋರಾಟಕ್ಕೆ ಎಂದೂ ಧಕ್ಕೆ ಬರಬಾರದು ಎಂದು ಜಯಲಲತಾ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.

ಕೆಲವು ವಿಶ್ವಾಸಗಾತುಕರ ಟೀಕಗಳಿಂದ, ತಮಿಳು ಪರ ಕಾಳಜಿಗೆ ಎಂದೂ ಧಕ್ಕೆಯಾಗಬಾರದು ಎಂದು ಹೇಳಿರುವ ಕರುಣಾನಿಧಿ, ಈ ಮುಷ್ಕರವನ್ನು ಒಂದು ನಾಟಕ ಎಂದು ಜರಿಯುವ ಮಂದಿಯ ಬಗ್ಗೆ ತಲೆಕೆಡಿಸಬೇಕಾಗಿಲ್ಲ ಎಂದಿದ್ದಾರೆ. ಆದರೆ, ಎಲ್ಲ ತಮಿಳರೂ ಒಟ್ಟಾಗಿ ನಿಂತರೆ ಮಾತ್ರ ನಮ್ಮ ಗುರಿಯನ್ನು ತಲುಪಿ ವಿಜಯ ಸಾಧಿಸಬಹುದು ಎಂದೂ ಇದೇ ಸಂದರ್ಭ ಅವರು ಹೇಳಿದರು.

ಗುರುವಾರ ಆಡಳಿತ ಪಕ್ಷ ಕರೆ ನೀಡಿದ್ದ ಬಂದ್‌ಗೆ ವಿರೋಧಪಕ್ಷವಾದ ಎಐಎಡಿಎಂಕೆ ಸಹಕಾರ ನೀಡಿರಲಿಲ್ಲ. ಹಾಗೂ ಈ ಬಂದ್‌ನ್ನು ಕೇವಲ ನಾಟಕ ಎಂದು ಟೀಕೆ ಮಾಡಿತ್ತು. ಪಕ್ಷಬೇಧವೆನ್ನದೆ ತಮಿಳು ಪರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಬಂದ್‌ಗೆ ಕರೆನೀಡಿದ್ದ ಸಂದರ್ಭ ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದರು.
ಶ್ರೀಲಂಕಾ ಸರ್ಕಾರದ ಒಡೆದು ಆಳುವ ನೀತಿಯ ಬಿಸಿ ತಮಿಳುನಾಡಿಗೂ ತಟ್ಟಿದೆ ಎಂದ ಕರುಣಾನಿಧಿ, ತಮಿಳುನಾಡಿನಲ್ಲೂ ಈಗ ಬಿರುಕು ಆರಂಭವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಈ ಬಂದ್ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸುವುದು ತಮಿಳಿಗರ ಗುರಿ. ಇದು ಕೇಂದ್ರಕ್ಕೆ ತಲುಪಿದೆ. ರಾಜ್ಯದಲ್ಲೇ ಹಲವೆಡೆ ಅಡೆತಡೆಗಳು ಎದುರಾದರೂ, ಬಂದ್ ಮೂಲಕ ತಮಿಳರು ಒಕ್ಕೊರಲಿನಿಂದ ಕೇಂದ್ರಕ್ಕೆ ನಮ್ಮ ಸಂದೇಶವನ್ನು ರವಾನಿಸಿದ್ದೇವೆ ಎಂದು ಕರುಣಾನಿಧಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಡ್ವಾಣಿಗೆ ಸ್ವಂತ ನಿರ್ಣಯ ಜಾರಿಗೊಳಿಸುವ ತಾಕತ್ತಿಲ್ಲ: ಸೋನಿಯಾ
ಆಕೃತಿ ಸಾವು-ಶಾಲೆ ಬಂದ್: ತನಿಖೆಗೆ ಆದೇಶ
ಫಿಲಿಭಿತ್ ಕಾಂಗ್ರೆಸ್‌ ಅಭ್ಯರ್ಥಿ ವಿರೇಂದರ್ ಸಿಂಗ್ ಆಸ್ತಿ 631 ಕೋಟಿ!
ತನ್ನ ಪತ್ನಿಯಿಂದಲೇ ಏಟು ತಿಂದ ಸಚಿವ ಮಹಾಶಯ
ದುರ್ಬಲ ಅಲ್ಲದಿದ್ರೆ ಲಾಲು ಉಚ್ಚಾಟಿಸಿ: ಪ್ರಧಾನಿಗೆ ಬಿಜೆಪಿ
2ನೇ ಹಂತ-ಶೇ.55ರಷ್ಟು ಶಾಂತಿಯುತ ಮತದಾನ