ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರ ವಿವಾದದಲ್ಲಿ ತಾಲಿಬಾನ್ ಹಸ್ತಕ್ಷೇಪವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ ವಿವಾದದಲ್ಲಿ ತಾಲಿಬಾನ್ ಹಸ್ತಕ್ಷೇಪವಿಲ್ಲ
ಕಾಶ್ಮೀರ ವಿವಾದದಲ್ಲಿ ತಾನು ತಲೆಹಾಕುವುದಿಲ್ಲ ಎಂಬುದಾಗಿ ತಾಲಿಬಾನ್ ಹೇಳಿದೆ. ಕಾಶ್ಮೀರಿಗಳು ಶರಿಯಾ ಅಥವಾ ಇಸ್ಲಾಮಿಕ್ ಕಾನೂನಿಗೆ ಒತ್ತಾಯಿಸದಿರುವ ಕಾರಣ ಈ ನಿಲುವು ಹೊಂದಿರುವುದಾಗಿ ಉಗ್ರಗಾಮಿ ಸಂಘಟನೆ ಹೇಳಿದೆ.

ಉಗ್ರರ ಪರವಾಗಿ ಪಾಕಿಸ್ತಾನಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ನಿಷೇಧಿತ ಸಂಘಟನೆ ತೆಹ್ರಿಕ್-ಇ-ನಿಫಾಜ್-ಇ ಶರಿಯಾ ಮುಹಮ್ಮದಿ(ಟಿಎಸ್ಎನ್ಎಂ)ಯ ನಾಯಕ ಸೂಫಿ ಮೊಹಮ್ಮದ್ ಅವರು ಈ ವಿಚಾರವನ್ನು ಹೊರಸೂಸಿದ್ದಾರೆ. ಜಿಯೋ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಸೂಫಿ ಅವರು ಈ ವಿಚಾರ ವ್ಯಕ್ತಪಡಿಸಿದ್ದಾರೆ.

ಸಂದರ್ಶನದ ಆಯ್ದಭಾಗ ಇಂತಿದೆ.
ಜಿಯೋ ಟಿವಿ: ಕಾಶ್ಮೀರಿ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅಲ್ಲದೆ ಅವರು ಕಾಶ್ಮೀರದಲ್ಲಿ ಶರಿಯಾ ಜಾರಿಯನ್ನು ಬಯಸುತ್ತಿದ್ದಾರೆ. ಪಾಕಿಸ್ತಾನವೂ ಸಹ ಕಾಶ್ಮೀರ ತನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿದೆ. ನೀವ್ಯಾಕೆ ಅವರಿಗೆ ಸಹಾಯಮಾಡಬಾರದು?

ಸೂಫಿ ಮೊಹಮ್ಮದ್: ಕಾಶ್ಮೀರಿಗಳು ಶರಿಯಾ ಕಾನೂನು ಬೇಕು ಎಂದು ಯಾವತ್ತೂ ಹೇಳಿಲ್ಲ. ಅವರು ಸ್ವಾಯತ್ತತೆಗಾಗಿ ಹೋರಾಡುತ್ತಿದ್ದಾರೆ

ಜಿಯೋ: ಅಂದರೆ, ಕಾಶ್ಮೀರಿ ಜಿಹಾದ್‌ಗೂ ಪಾಕಿಸ್ತಾನಿಗಳಿಗೂ ಯಾವುದೇ ಸಂಬಧವಿಲ್ಲವೇ?

ಮೊಹಮ್ಮದ್: ಕಾಶ್ಮೀರಗಳಿಗೆ ಶರಿಯಾ ಕಾನೂನು ಬೇಕು ಎಂಬುದಾಗಿ ನಮಗೆಂದೂ ಕೇಳಿಬಂದಿಲ್ಲ. ಅವರು ತಮಗೆ ಪಾಕಿಸ್ತಾನಕ್ಕೆ ಪ್ರವೇಶ ಬೇಕು ಎಂದು ಹೇಳುತ್ತಾರೆ ಮತ್ತು ಪಾಕಿಸ್ತಾನವೂ ಕಾಶ್ಮೀರವನ್ನು ಅವಿಭಾಜ್ಯ ಅಂಗವೆಂದು ಹೇಳುತ್ತಿದೆ. ಎಲ್ಲಿಯೂ ಶರಿಯಾದ ಪ್ರಸ್ತಾಪವೇ ಇಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನಿಲ್ ಅಂಬಾನಿ ಕೊಲೆ ಸಂಚು: ಇಬ್ಬರ ಬಂಧನ
ಹಾಗಾದ್ರೆ ನಿಮ್ಮ ನಿಲುವೇನು: ಬಿಜೆಪಿಗೆ ಸಿಂಗ್ ಪ್ರಶ್ನೆ
ಬಾಬ್ರಿ ಧ್ವಂಸವು ಯಾರಿಗೂ ತಿಳಿದಿರಲಿಲ್ಲ: ಉಮಾ
ಜಯಾ-ಮಾಯಾರ ಹಂಗು ಕಾಂಗ್ರೆಸ್‌ಗೆ ಬೇಡ?
ಸಿಖ್ ಆಗಿದ್ದೂ ಪಾಕ್‌ಸಿಖ್ಖರನ್ನು ಕಾಪಾಡದ ಸಿಂಗ್
ಚುನಾವಣೆ ನಂತರ ಮೈತ್ರಿ ಸಾಧ್ಯತೆ ತಳ್ಳಿಹಾಕುವಂತಿಲ್ಲ?