ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಪ್ಪುಹಣ: ಹೆಚ್ಚು ಮಾಹಿತಿ ನೀಡಿ- ಕೇಂದ್ರಕ್ಕೆ ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಪ್ಪುಹಣ: ಹೆಚ್ಚು ಮಾಹಿತಿ ನೀಡಿ- ಕೇಂದ್ರಕ್ಕೆ ಸು.ಕೋ
ವಿದೇಶದ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕೇಂದ್ರ ಸರ್ಕಾರವು ಏನೆಲ್ಲ ಮಾಡಿದೆ ಎಂಬ ಕುರಿತು ಹೆಚ್ಚು ಮಾಹಿತಿಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಾಕೀತು ಮಾಡಿದೆ.

ಮುಖ್ಯನ್ಯಾಯಧೀಶ ಕೆ.ಜಿ. ಬಾಲಕಷ್ಣನ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಮುಕುಂದಾಕಂ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ನಿಗದಿ ಪಡಿಸಿದೆ.

ವಿದೇಶಗಳಲ್ಲಿ ಕೊಳೆಯುತ್ತಿರುವ ಭಾರತೀಯರ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಕಾರ್ಯಕೈಗೊಳ್ಳಲು ನಿರ್ದೇಶನ ನೀಡಬೇಕು ಎಂಬುದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಾನು ಈ ಕುರಿತು ಕಾರ್ಯಕೈಗೊಂಡಿರವುದಾಗಿ ಕೇಂದ್ರ ಹೇಳಿತ್ತು.

ಅಲ್ಲದೆ, ಈ ಅರ್ಜಿಯ ಸಲ್ಲಿಕೆಯು ಚುನಾವಣಾ ಪ್ರೇರಿತವಾಗಿದ್ದು, ಇದನ್ನು ವಜಾ ಮಾಡಬೇಕೆಂದು ಕೋರಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರ ವಿವಾದದಲ್ಲಿ ತಾಲಿಬಾನ್ ಹಸ್ತಕ್ಷೇಪವಿಲ್ಲ
ಅನಿಲ್ ಅಂಬಾನಿ ಕೊಲೆ ಸಂಚು: ಇಬ್ಬರ ಬಂಧನ
ಹಾಗಾದ್ರೆ ನಿಮ್ಮ ನಿಲುವೇನು: ಬಿಜೆಪಿಗೆ ಸಿಂಗ್ ಪ್ರಶ್ನೆ
ಬಾಬ್ರಿ ಧ್ವಂಸವು ಯಾರಿಗೂ ತಿಳಿದಿರಲಿಲ್ಲ: ಉಮಾ
ಜಯಾ-ಮಾಯಾರ ಹಂಗು ಕಾಂಗ್ರೆಸ್‌ಗೆ ಬೇಡ?
ಸಿಖ್ ಆಗಿದ್ದೂ ಪಾಕ್‌ಸಿಖ್ಖರನ್ನು ಕಾಪಾಡದ ಸಿಂಗ್