ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾಲ್ಕನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಲ್ಕನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ
ನಾಲ್ಕನೇ ಹಂತದ ಚುನಾವಣೆದೆ ರಣಾಂಗಣ ಸಿದ್ಧವಾಗಿದ್ದು, ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಗುರುವಾರ ನಡೆಯಲಿರುವ ನಾಲ್ಕನೆ ಹಂತದ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಕಾಂಗ್ರೆಸ್ 'ಆಪತ್ಭಾಂದವ' ಪ್ರಣಬ್ ಮುಖರ್ಜಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರುಗಳ ಹಣೆ ಬರಹ ನಿರ್ಧಾರವಾಗಲಿದೆ.

ಎನ್‌ಡಿಎ, ಯುಪಿಎ ಮತ್ತು ತೃತೀಯ ರಂಗಗಳ ತಾರಪ್ರಚಾರಕರು ರಾಷ್ಟ್ರಾದ್ಯಂತ ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಮಾಡಿದ್ದರು. ಆಡ್ವಾಣಿ ಅವರು ಮನಮೋಹನ್ ಸಿಂಗ್ ದುರ್ಬಲ ಎನ್ನುವುದನ್ನು ಮುಂದುವರಿಸಿದ್ದರೆ, ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಹಾಗೂ ಆವರ ಪುತ್ರ ರಾಹುಲ್ ಗಾಂಧಿ, ಕಾಂಧಹಾರ್ ವಿಮಾನಾಪಹರಣದ ವೇಳೆ ಉಗ್ರರ ಬಿಡುಗಡೆಯ ವಿಚಾರವನ್ನು ಎತ್ತಿಆಡಿದ್ದರು.

ಈ ಮಧ್ಯೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಎಡಪಕ್ಷಗಳು ಅಣುಒಪ್ಪಂದವನ್ನು ಬೆಂಬಲಿಸದೇ ಇರುವುದನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದರು.

119 ಮಹಿಳೆಯರು ಸೇರಿದಂತೆ ಒಟ್ಟು 1,315 ಅಭ್ಯರ್ಥಿಗಳು ಗುರುವಾರದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಎಂಟು ರಾಜ್ಯಗಳ 85 ಲೋಕ ಸಭಾ ಸ್ಥಾನಗಳಿಗೆ ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಇಟಾ ಲೋಕಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇವರಲ್ಲದೇ, ಫಾರೂಕ್ ಅಬ್ದುಲ್, ಸಚಿನ್ ಪೈಲೆಟ್, ಶೇಖರ್ ಸುಮನ್, ಭಜನ್ ಲಾಲ್, ಶತೃಘ್ನ ಸಿನ್ಹಾ ಕೂಡಾ ಕಣದಲ್ಲಿದ್ದಾರೆ.

ರಾಜಸ್ಥಾನದ ಎಲ್ಲಾ 25, ಹಾಗೆಯೇ ಹರಿಯಾಣದ 10 ಮತ್ತು ದೆಹಲಿಯ ಎಲ್ಲಾ 7 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದಲ್ಲದೆ, ಬಿಹಾರದ 3, ಜಮ್ಮು ಕಾಶ್ಮೀರದ 1, ಪಂಜಾಬ್‌ನ 18, ಉತ್ತರ ಪ್ರದೇಶದ 18 ಹಾಗೂ ಪಶ್ಚಿಮ ಬಂಗಾಲದ 17 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

9.46 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 1.29 ಲಕ್ಷ ಮತಗಟ್ಟೆಗಳನ್ನು ರಚಿಸಲಾಗಿದ್ದು, ಸುಮಾರು 6 ಲಕ್ಷ ಜನರು ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ

ನಾಲ್ಕನೆ ಹಂತ ಪೂರ್ಣಗೊಂಡರೆ, 545 ಸ್ಥಾನಗಳಲ್ಲಿ 457 ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಂತಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಲಾ ದೀಕ್ಷಿತ್ ಹೊಂದಾಣಿಕೆ ಹೇಳಿಕೆಗೆ ನಿತೀಶ್ ನಕಾರ
ಮನಮೋಹನ್ ಪರಿಸ್ಥಿತಿ ಕರುಣಾಜನಕ: ಆಡ್ವಾಣಿ
70 ದಾಟಿದ ರಾಜಕಾರಣಿಗಳ ಯೌವ್ವನದ ರಹಸ್ಯ
ಗೆಲುವಿಗಾಗಿ ಸ್ಫರ್ಧೆ, ವಿರೋಧಿಸ್ಥಾನದಲ್ಲಿ ಕೂರಲಲ್ಲ: ರಾಹುಲ್
ದಿಢೀರ್ ಶ್ರೀಮಂತರಾಗಬೇಕೇ? ಸಂಸದರಾಗಿ!
ಬಿಎಸ್ಪಿ ಕಿಂಗ್ ಮೇಕರ್ ಆಗಲಿದೆ: ಮಾಯಾವತಿ