ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಂಧ್ರ ರಾಜಕೀಯ ರಂಗದಲ್ಲಿ ಚಿರುಗೆ ಎಲ್ಲಿಲ್ಲದ ಬೇಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರ ರಾಜಕೀಯ ರಂಗದಲ್ಲಿ ಚಿರುಗೆ ಎಲ್ಲಿಲ್ಲದ ಬೇಡಿಕೆ
ಪ್ರಜಾ ರಾಜ್ಯಂ ಮೂಲಕ ರಾಜಕೀಯ ರಂಗದಲ್ಲಿ ಮಿಂಚಲು ಹೊರಟಿರುವ ಮೆಗಾಸ್ಟಾರ್ ಚಿರಂಜೀವಿ ಇದೀಗ ಆಂಧ್ರಪ್ರದೇಶದ ರಾಜಕೀಯ 'ರಂಗ'ದಲ್ಲಿಯೂ ಭಾರಿ ಬೇಡಿಕೆಯಲ್ಲಿರುವ ನಟ. ಕಾಂಗ್ರೆಸ್ ಬಳಿಕ, ಇದೀಗ ಕಾಂಗ್ರೆಸ್ ವಿರೋಧಿ ವೇದಿಕೆ ಕಟ್ಟಲು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ಚಿರಂಜೀವಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದೆ.

ಸ್ವಂತ ಬಲದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಸವಾಲೊಡ್ಡುವುದು ಕಷ್ಟಸಾಧ್ಯ ಎಂದು ನಂಬಿರುವ ಟಿಡಿಪಿಯ ಚಂದ್ರಬಾಬು ನಾಯ್ಡು, ಇದಕ್ಕಾಗಿ ಬಲ ಒಗ್ಗೂಡಿಸಲು ಚಿರಂಜೀವಿ ಅವರ ಪಿಆರ್‌ಪಿ (ಪ್ರಜಾ ರಾಜ್ಯಂ ಪಾರ್ಟಿ) ಯೊಂದಿಗೆ ಪಾಲುದಾರಿಕೆ ನಡೆಸಲು ನಿರ್ಧರಿಸಿದ್ದಾರೆ.

ನಾಯ್ಡು ಅವರ ಆತ್ಮೀಯನೂ ಆಗಿರುವ ಚಿತ್ರ ನಿರ್ಮಾಪಕ ಅಶ್ವಿನಿ ದತ್ ಅವರು ಚಿರಂಜೀವಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಆದರೆ ಇದೊಂದು ಸೌಜನ್ಯದ ಭೇಟಿ ಎಂದು ಚಿರಂಜೀವಿ ಅವರು ರಾಜತಾಂತ್ರಿಕ ಕಾರಣಗಳನ್ನು ನೀಡಿ ಸುಮ್ಮನಾಗಿದ್ದಾರೆ.

ಪ್ರಜಾ ರಾಜ್ಯಂ ಮುಖ್ಯಸ್ಥ ಚಿರಂಜೀವಿಯತ್ತ ಕಾಂಗ್ರೆಸ್ ಪಕ್ಷವೂ ಕಣ್ಣು ಮಿಟುಕಿಸಿತ್ತು. ಆಂಧ್ರದ ಕಾಂಗ್ರೆಸ್ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ದೂತ, ಕೆವಿಪಿ ರಾಮಚಂದ್ರ ರಾವ್ ಅವರು ಚಿರಂಜೀವಿಯ ಭಾವನೂ ಆಗಿರುವ ಪ್ರಜಾ ರಾಜ್ಯಂ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್‌ರನ್ನು ಭೇಟಿಯಾಗಿದ್ದಾರೆ.

ಆದರೆ, ವಿಧಾನಸಭೆ ಚುನಾವಣೆಗಳೂ ನಡೆಯುತ್ತಿರುವ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಅವರು ತಮ್ಮೆಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಾಕಷ್ಟು ಸಂಖ್ಯೆಗಳು ದೊರೆತರೆ ನೇರವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆಯೇ ಚಿರು ಕಣ್ಣಿಟ್ಟಿದ್ದಾರೆ ಮತ್ತು ಕಾಂಗ್ರೆಸ್ ಅಥವಾ ತೆಲುಗು ದೇಶಂ ಸಹಾಯವನ್ನೂ ಯಾಚಿಸಬಹುದು ಎನ್ನಲಾಗುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಗದೆ ಶಿಸ್ತಿನಿಂದ ವರ್ತಿಸಿ: ಕಸಬ್‌ಗೆ ನ್ಯಾಯಾಧೀಶರ ತಾಕೀತು
ಮೇ 16ರಿಂದ ಸರಕಾರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿರುವ ಸೋನಿಯಾ
ಚುನಾವಣೆಯ ನಂತರ ರಾಜಕೀಯ ನಿವೃತ್ತಿ: ಅಮರ್ ಸಿಂಗ್
ಯುಪಿಎ ಆಡಳಿತದಲ್ಲಿ ಮೂರು ಪಟ್ಟು ಬೆಲೆ ಏರಿಕೆ: ಬಿಜೆಪಿ
ಅಂತಿಮ ಹಂತ ಚುನಾವಣೆ: ಪ್ರಚಾರ ಅಂತ್ಯ
ನಕ್ಸಲರ ಅಟ್ಟಹಾಸಕ್ಕೆ 13 ಪೊಲೀಸರು ಬಲಿ