ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚತುರ್ಥರಂಗದಲ್ಲಿ ಬಿಕ್ಕಟ್ಟಿಲ್ಲ: ಪಾಸ್ವಾನ್ ಉವಾಚ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚತುರ್ಥರಂಗದಲ್ಲಿ ಬಿಕ್ಕಟ್ಟಿಲ್ಲ: ಪಾಸ್ವಾನ್ ಉವಾಚ
ಚತುರ್ಥ ರಂಗದಲ್ಲಿ ಬಿಕ್ಕಟ್ಟು ಇದೆ ಎಂಬ ವರದಿಯನ್ನು ತಳ್ಳಿಹಾಕಿರುವ ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್, ತಮ್ಮ ಪಕ್ಷ, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷ ಒಂದಾಗಿಯೇ ಇದ್ದು, ತಾವು ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚಿಸಲಿದ್ದೇವೆ ಎಂದು ಮಂಗಳವಾರ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್‌ಜೆಪಿ ಮತ್ತು ಆರ್‌ಜೆಡಿ ಯುಪಿಎ ಅಂಗವಾಗಿದ್ದು, ಸಮಾಜವಾದಿ ಪಕ್ಷವು ಈ ಮೈತ್ರಿಕೂಟವನ್ನು ಬೆಂಬಲಿಸುತ್ತದೆ. ಕೇಂದ್ರದಲ್ಲಿ ಜಾತ್ಯತೀತ ಸರ್ಕಾರದ ರಚನೆಗಾಗಿ ನಾವೆಲ್ಲರೂ ಒಂದಾಗಿ ದುಡಿಯುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಸೋಮವಾರವಷ್ಟೇ ರಾಂಪುರದಲ್ಲಿನ ರಾಲಿಯಲ್ಲಿ ಭಾಗವಹಿಸದೇ ಇದ್ದ ಕಾರಣವನ್ನು ಕೇಳಿದಾಗ, ಆದಾಗ್ಯೂ ಅಮರ್ ಸಿಂಗ್ ಅವರು ರಾಲಿಯಲ್ಲಿ ಭಾಗವಹಿಸಲು ಆಮಂತ್ರಿಸಿದ್ದರೂ ತಾವು ಈ ಮೊದಲೇ ಬೇರೆ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿರುವುದರಿಂದ ಪಾಲ್ಗೊಳ್ಳಲು ಆಗಿಲ್ಲ ಎಂದು ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ.

ಆ ಹಿನ್ನೆಲೆಯಲ್ಲಿ ಪಾಸ್ವಾನ್ ಗೈರು ಹಾಜರಾಗಿದ್ದರಿಂದ ಚತುರ್ಥರಂಗದಲ್ಲಿ ಬಿಕ್ಕಟ್ಟು ಆರಂಭವಾಗಿದೆ ಎಂಬ ಊಹಾಪೋಹ ಹಬ್ಬಿರುವ ನಿಟ್ಟಿನಲ್ಲಿ ಈ ಹೇಳಿಕೆ ಬಹಿರಂಗಗೊಂಡಿದೆ.

ನಾವು, ಆರ್‌ಜೆಡಿ ಹಾಗೂ ಮುಲಾಯಂ ಸಿಂಗ್ ಒಟ್ಟಿಗೆ ಇದ್ದೇವೆ. ಮುಲಾಯಂ ಸಿಂಗ್ ಅವರ ಬೆಂಬಲ ಇಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಸಾಧ್ಯವಿದೆಯೇ ಎಂದು ಪಾಸ್ವಾನ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಂಧಮಾಲ್ ಹಿಂಸಾಚಾರದಲ್ಲಿ ಬಲಿಯಾದವರು ಬದುಕಿದ್ದಾರೆ!
ಯಾರು ಬೇಕಾದ್ರೂ ಬನ್ನಿ: ಎನ್‌ಡಿಎ ಮುಕ್ತ ಆಹ್ವಾನ
ಆಂಧ್ರ ರಾಜಕೀಯ ರಂಗದಲ್ಲಿ ಚಿರುಗೆ ಎಲ್ಲಿಲ್ಲದ ಬೇಡಿಕೆ
ನಗದೆ ಶಿಸ್ತಿನಿಂದ ವರ್ತಿಸಿ: ಕಸಬ್‌ಗೆ ನ್ಯಾಯಾಧೀಶರ ತಾಕೀತು
ಮೇ 16ರಿಂದ ಸರಕಾರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿರುವ ಸೋನಿಯಾ
ಚುನಾವಣೆಯ ನಂತರ ರಾಜಕೀಯ ನಿವೃತ್ತಿ: ಅಮರ್ ಸಿಂಗ್