ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಖ್‌ಗುರು ಸಂತ ರಮಾನಂದರ ದೇಹ ಭಾರತಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಖ್‌ಗುರು ಸಂತ ರಮಾನಂದರ ದೇಹ ಭಾರತಕ್ಕೆ
ವಿಯೆನ್ನಾ ಗುರುದ್ವಾರದಲ್ಲಿ ಮೇ 24ರಂದು ಹತ್ಯೆಗೀಡಾಗಿರುವ ಸಿಖ್‌ಗುರು ಡೇರಾ ಸಚ್‌ಖಾಂಡ್ ಬಲ್ಲನ್ ಪಂಥದ ಸಂತ ರಾಮಾನಂದ ಅವರ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ತರಲಾಗಿದೆ. ಇದೇವೇಳೆ ದಾಳಿಯ ವೇಳೆ ಗಾಯಗೊಂಡಿರುವ ಡೇರಾ ಸಚ್ ಪಂಥದ ನಾಯಕ ನಿರಂಜನ್ ದಾಸ್ ಅವರೂ ಸಹ ಅದೇ ವಿಮಾನದಲ್ಲಿ ಬುಧವಾರ ರಾತ್ರಿ ಭಾರತದಲ್ಲಿ ಬಂದಿಳಿದಿದ್ದಾರೆ.

ಕೇಂದ್ರ ಸಚಿವರಾದ ಅಂಬಿಕಾ ಸೋನಿ, ಕುಮಾರಿ ಸೆಲ್ಜಾ, ಹಾಗೂ ಪ್ರಣೀತ್ ಕೌರ್ ಈ ವೇಳೆ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಗುರುವಿನ ಮೃತದೇಹವನ್ನು ತರಲು ಪಂಜಾಬ್ ಸರ್ಕಾರದ ನಿಯೋಗ ಒಂದು 15 ಸೀಟುಗಳ ವಿಶೇಷ ವಿಮಾನದಲ್ಲಿ ಆಸ್ಟ್ರಿಯಾಗೆ ತೆರಳಿತ್ತು.

ವಿಮಾನದಲ್ಲಿ ಬಂದಿಳಿದ ಇವರನ್ನು ಹೆಲಿಕಾಫ್ಟರ್‌ನಲ್ಲಿ ಜಲಂಧರ್ ಸಮೀಪದ ಬಲ್ಲನ್ ಎಂಬಲ್ಲಿರುವ ಡೇರಾಗೆ ಹೆಲಿಕಾಫ್ಟರ್‌ನಲ್ಲಿ ಕರೆದೊಯ್ಯಲಾಯಿತು.

ಪಂಜಾಬ್ ಸರ್ಕಾರವು ವಿಶೇಷ ವಿಮಾನ ಹಾಗೂ ಹೆಲಿಕಾಫ್ಟರ್‌ಗಾಗಿ ಒಂದು ಕೋಟಿಗಿಂತಲೂ ಅಧಿಕ ಮೊತ್ತದ ಬಾಡಿಗೆ ನೀಡಬೇಕಿದೆ.

ಸಂಜೆ ಅಂತ್ಯಕ್ರಿಯೆ
ಗುರು ರಮಾನಂದರ ಅಂತ್ಯಕ್ರಿಯೆಯು ಸಂಜೆ ನಾಲ್ಕು ಗಂಟೆಗೆ ನಡೆಯಲಿದ್ದು ಪಂಜಾಬಿನಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನುರಾಧಾ ಬಾಲಿ ಜತೆ ಎಲ್ಲಾ ಸಂಬಂಧಕ್ಕೆ ಎಳ್ಳುನೀರು
ಭಾರತದ ಅಧಿಕಾರಿವರ್ಗ ಅತ್ಯಂತ ಅದಕ್ಷವಂತೆ!
ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿ ಜೇಟ್ಲಿ
ಲಂಚಾವತಾರ: ರಾಜಕಾರಣಿಗಳು ಫಸ್ಟ್, ಅಧಿಕಾರಿಗಳು ನೆಕ್ಸ್ಟ್
ಕೆಲವರಿಗೆ ಮೀರಾ ಕುಮಾರ್ ಇನ್ನೂ 'ಸ್ಪೀಕರ್ ಸರ್'!
ನಿಷ್ಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸುವೆ: ಮೀರಾ