ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅವಳಿಕೊಲೆ ಆರೋಪಿ ಪದಂಸಿನ್ನಾ ಪಾಟೀಲ್ ಎನ್‌ಸಿಪಿಯಿಂದ ಅಮಾನತ್ತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಳಿಕೊಲೆ ಆರೋಪಿ ಪದಂಸಿನ್ನಾ ಪಾಟೀಲ್ ಎನ್‌ಸಿಪಿಯಿಂದ ಅಮಾನತ್ತು
ತೀವ್ರ ರಾಜಕೀಯ ಒತ್ತಡಕ್ಕೆ ಸಿಲುಕಿದ ಎನ್‌ಸಿಪಿ ಪಕ್ಷವು, ಅವಳಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪದಂಸಿನ್ನಾ ಪಾಟೀಲ್ ಅವರನ್ನು ಅಮಾನತ್ತುಗೊಳಿಸಿದೆ. ಪಾಟೀಲ್ ಅವರು ನಿರಪರಾಧಿ ಎಂದು ಸಾಬೀತಾದರೆ ಅವರ ಅಮಾನತ್ತನ್ನು ಹಿಂಪಡೆಯಲಾಗುವುದು ಎಂದು ಪಕ್ಷ ಹೇಳಿದೆ.

ಪಕ್ಷದ ಶಿಸ್ತು ಸಮಿತಿಯು ಬುಧವಾರ ಸಭೆ ಸೇರಿದ್ದು, ಮಹಾರಾಷ್ಟ್ರದ ಓಸ್ಮಾನಾಬಾದ್ ಸಂಸದರಾಗಿರುವ ಪಾಟೀಲರನ್ನು ಪಕ್ಷದ ಸದಸ್ಯತ್ವದಿಂದ ಅಮಾನತ್ತುಗೊಳಿಸಲು ನಿರ್ಧರಿಸಿತು ಎಂದು ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಪವನ್‌ರಾಜ್ ನಿಂಬಾಳ್ಕರ್ ಹಾಗೂ ಅವರ ಕಾರುಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀಲರನ್ನು ಸಿಬಿಐ ಮೂರು ದಿನಗಳ ಹಿಂದೆ ಬಂಧಿಸಿತ್ತು. ಮೂರು ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು.

ಎನ್‌ಸಿಪಿ ಪಾಟೀಲರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬುದಾಗಿ ಆರೋಪಿಸಿದ್ದ ವಿರೋಧಿ ಪಕ್ಷಗಳು ಕ್ರಮಕೈಗೊಳ್ಳಲು ಒತ್ತಾಯಿಸಿದ್ದವು.

ಹತ್ಯೆ ಪ್ರಕರಣ: ಎನ್‌ಸಿಪಿ ಸಂಸದ ಪಾಟೀಲ್ ಸೆರೆ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಎಸ್ ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ಪ್ರಧಾನ ಆದ್ಯತೆ
ಕ್ಯಾಪಿಟೇಶನ್ ವಿವಾದ: ಚೆನ್ನೈಗೆ ತನಿಖಾ ತಂಡ
26/11: ಕಸಬ್‌ನನ್ನು ಗುರುತಿಸಿದ 10ರ ಬಾಲೆ
ಸಚಿವಗಿರಿ, ರಾಜ್ಯಪಾಲರ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಸ್ಫರ್ಧೆ
ಸತ್ತ ಮೇಲೆ ಬದುಕಿ ಬಂದು ಸೇಡು ತೀರಿಸಿದ ಹುಡುಗಿ!
ಅಧಿಕಾರಿಗಳಿಗೆ ರಾಜಕೀಯ ಒತ್ತಡ ಮುಕ್ತಿಗಾಗಿ ಬಿಲ್