ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಅನೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬರದೇ ರೈತರು ಕಂಗಾಲಾಗಿದ್ದು, ಬರಗಾಲದ ಕರಿನೆರಳು ಚಾಚಿರುವ ನಡುವೆ, ಮುಂಬೈನಲ್ಲಿ ಶುಕ್ರವಾರ ಭಾರೀ ಮಳೆ ಅಪ್ಪಳಿಸಿದೆ. ಕೇಂದ್ರ ಮುಂಬೈನ ಬೈಸುಲ್ಲಾ, ಪಾರೆಲ್, ಮಹಾಲಕ್ಷ್ಮಿ, ಮಹಿಮ್, ಗೋರೆ‌ಗಾವ್, ಮೈಲಾನ್ ಸಬ್‌ವೇನಲ್ಲಿ ಜಲಾವೃತವಾಗಿವೆ ಎಂದು ಗ್ರೇಟರ್ ಮುಂಬೈ ನಗರಸಭೆಯ ಅಧಿಕಾರಿ ತಿಳಿಸಿದರು.

ಪೂರ್ವ ಉಪನಗರಗಳ ಭಾಂಡುಪ್, ಕುರ್ಲಾ ಮತ್ತು ಮುಲುಂಡ್‌ನಲ್ಲಿ ಕೂಡ ಜಲಾವೃತವಾಗಿದೆ. ವಾಹನ ಸ್ಥಂಚಾರ ನಿಧಾನಗತಿಯಲ್ಲಿದ್ದು, ವಾಹನ ವೇಗವಾಗಿ ಚಲಿಸಿದರೆ ಅಪಘಾತಗಳುಂಟಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

ಮಿನಿ ಟ್ಯಾಂಕರ್‌ವೊಂದು ವಿಲೆ ಪಾರ್ಲೆಯ ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಗುಚಿಕೊಂಡಿದ್ದು ಯಾರೂ ಗಾಯಗೊಂಡಿಲ್ಲವೆಂದು ಅಧಿಕಾರಿ ಹೇಳಿದ್ದಾರೆ. ವರುಣನ ಆರ್ಭಟ ಮುಂದುವರಿದರೆ ನೀರು ವೇಗವಾಗಿ ಹರಿದುಹೋಗುವುದರ ಖಾತ್ರಿಗೆ ಎಂಸಿಜಿಎಂ ಸಜ್ಜಾಗಿರುವುದಾಗಿ ಅಧಿಕಾರಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂದು ವಿಷಯದಲ್ಲಿ ಫೇಲ್ ಆದ್ರೂ ತೇರ್ಗಡೆ!
ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಚಿದಂಬರಂ ಆಯ್ಕೆ ಸಿಂಧುವಲ್ಲ: ಹೈಕೋರ್ಟ್‌ಗೆ ದೂರು
ಅಮರನಾಥ ಯಾತ್ರೆ ಪುನರಾರಂಭ
ಅಸ್ಸಾಂ ರಾಜ್ಯಪಾಲ ಶಿವಚರಣ್ ನಿಧನ
ಅಸ್ಸಾಂ: ಉಗ್ರರ ಬಂದ್‌ ಕರೆಗೆ ಜನಜೀವನ ಅಸ್ತವ್ಯಸ್ತ