ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರ‌್ಯಾಗಿಂಗ್ ನಿವಾರಿಸಿ: ರಾಜ್ಯಪಾಲರಿಗೆ ರಾಷ್ಟ್ರಪತಿ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರ‌್ಯಾಗಿಂಗ್ ನಿವಾರಿಸಿ: ರಾಜ್ಯಪಾಲರಿಗೆ ರಾಷ್ಟ್ರಪತಿ ಪತ್ರ
ಕೆಲವು ಕಾಲೇಜುಗಳಲ್ಲಿ ರ‌್ಯಾಗಿಂಗ್ ಪ್ರಕರಣಗಳು ಘಟಿಸಿದ ಬಗ್ಗೆ ರಾಷ್ಟ್ರಪತಿ ಪ್ರತಿಭಾಪಾಟೀಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಶಿಕ್ಷಣಕ್ಷೇತ್ರದಲ್ಲಿ ಕಪ್ಪುಚುಕ್ಕಿಯ ನಿವಾರಣೆಗೆ ನೆರವು ನೀಡುವಂತೆ ರಾಜ್ಯಪಾಲರಿಗೆ ತಿಳಿಸಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಾದ ರಾಜ್ಯಪಾಲರಿಗೆ ಅವರು ಬರೆದಿರುವ ಪತ್ರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ನಿಯಂತ್ರಣ ವ್ಯವಸ್ಥೆ ಕುರಿತು ಮತ್ತು ರ‌್ಯಾಗಿಂಗ್ ತಡೆಗೆ ಕಾನೂನಿನ ಪ್ರತಿರಕ್ಷಣೆಯ ವಿಶ್ವಾಸಾರ್ಹ ವಿನ್ಯಾಸ ರಚಿಸಬೇಕೆ ಎನ್ನುವುದನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ರ‌್ಯಾಗಿಂಗ್ ಕುರಿತಂತೆ ಸುಪ್ರೀಂಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದ್ದು, ರ‌್ಯಾಗಿಂಗ್ ತಡೆಗೆ ನಿಯಮಗಳು ಸೇರಿದಂತೆ ಕಾನೂನುಗಳು ಈಗಾಗಲೇ ಜಾರಿಗೆ ಬಂದಿರುವುದರತ್ತ ಅವರು ಗಮನಸೆಳೆದರು.

ರ‌್ಯಾಗಿಂಗ್ ತಡೆಯುವುದು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರ ಮುಖ್ಯ ಜವಾಬ್ದಾರಿ ಎಂದು ಅವರು ಹೇಳಿದರು. ಆದರೆ ತಂದೆ, ತಾಯಿಗಳು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಕಿರಿಯ ವಿದ್ಯಾರ್ಥಿಗಳ ಜತೆ ಜವಾಬ್ದಾರಿಯಿಂದ ವರ್ತಿಸುವಂತೆ ಹಿತವಚನ ಹೇಳಬೇಕೆಂದು ಅವರು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾ ಪ್ರತಿಮೆ ಮೇಲೆ ಬುಲ್‌ಡೋಜರ್: ಎಸ್ಪಿ ಎಚ್ಚರಿಕೆ
10ನೇ ತರಗತಿ: ಗುಜರಾತ್ ಸ್ವಾಗತ, ಎಡಕ್ಕೆ ಪಿತೂರಿ ಶಂಕೆ
ಕಂಧಮಾಲ್-ಚರ್ಚ್ ನಿರ್ಮಿಸಿ ಹೊಸ ಜೀವನ ಆರಂಭಿಸಿ: ಚಿದು
ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಒಂದು ವಿಷಯದಲ್ಲಿ ಫೇಲ್ ಆದ್ರೂ ತೇರ್ಗಡೆ!