ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ: ಮತ್ತೊಂದು ಮೇಲ್ಸೇತುವೆ ಕುಸಿತ, 5 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ: ಮತ್ತೊಂದು ಮೇಲ್ಸೇತುವೆ ಕುಸಿತ, 5 ಸಾವು
ನಿರ್ಮಾಣಹಂತದಲ್ಲಿದ್ದ ದೆಹಲಿ ಮೆಟ್ರೋ ಮೇಲ್ಸೇತುವೆ ಕುಸಿದಿರುವ ದುರಂತವು ದಕ್ಷಿಣ ದೆಹಲಿಯಲ್ಲಿ ಸಂಭವಿಸಿದ್ದು, ದುರಂತದಲ್ಲಿ ಐದು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳ ಹಿಂದೆಯೂ ಇಂತಹುದೇ ದುರಂತ ಸಂಭವಿಸಿತ್ತು.

ಲಜ್‌ಪತ್ ನಗರದ ಧಮ್ರುತ್‌ಪುರದಲ್ಲಿನ ಲೇಡಿ ಶ್ರೀರಾಮ್ ಕಾಲೇಜು ಸಮೀಪ ನಸುಕಿನ ಐದು ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ.

ಕಾರ್ಯನಿರತರಾಗಿದ್ದ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಐದು ಮಂದಿ ಸತ್ತಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಮೆಟ್ರೋ ವಕ್ತಾರ ಅಂಜು ದಯಾಲ್ ಅವರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತಕ್ಕೆ ಕಾರಣವೇನೆಂದು ತನಿಖೆ ನಡೆಸುತ್ತಿರುವುದಾಗಿ ದಯಾಳ್ ತಿಳಿಸಿದ್ದಾರೆ. ಸೇತುವೆಯ ವಿನ್ಯಾಸದಲ್ಲಿ ಸಮಸ್ಯೆ ಇರಬೇಕೆಂದು ತೋರುತ್ತದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ನುಡಿದರು.

ಇಬ್ಬರು ಕಾರ್ಮಿಕರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು ಅವರು ಸತ್ತಿರುವುದು ದೃಢಪಟ್ಟಿದೆ. ದುರಂತದಲ್ಲಿ ಸತ್ತವರು ಮತ್ತು ಗಾಯಗೊಂಡ ಎಲ್ಲರೂ ಗಮ್ಮನ್ ಇಂಡಿಯಾ ಗುತ್ತಿಗೆ ಸಂಸ್ಥೆಯ ಕಾರ್ಮಿಕರು ಎಂದು ಅವರು ತಿಳಿಸಿದ್ದಾರೆ

ನಿರ್ಮಾಣ ಹಂತದಲ್ಲಿದ್ದ ಸೇತುವೆಯು ನೀರಿನ ಪೈಪ್‌ಲೈನ್‌ ಮೇಲೆ ಬಿದ್ದು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಸ್ಥಳದಲ್ಲಿ ಸುಮಾರು 20ರಿಂದ 25ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಕಳೆದ ಅಕ್ಟೋಬರ್‌ನಲ್ಲಿಯೂ ಇಂತಹುದೇ ದುರಂತ ಸಂಭವಿಸಿದ್ದು, ಇಬ್ಬರು ಸತ್ತು 16 ಮಂದಿ ಗಾಯಗೊಂಡಿದ್ದರು.

ದುರಂತದ ಬಗ್ಗೆ ತನಿಖೆ
ಮೇಲ್ಸೇತುವೆ ಕುಸಿತ ದುರಂತದ ಕುರಿತು ತನಿಖೆ ನಡೆಸುವುದಾಗಿ ಹೇಳಿರುವ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್, ದುರಂತದಲ್ಲಿ ಮಡಿದವರಿಗಾಗಿ ಕಂಬನಿ ಮಿಡಿದಿದ್ದಾರೆ. ಅವರು ಬಲಿಪಶುಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಲ್ಯ ಸಲಹೆಯನ್ನು ನಿರಾಕರಿಸಿದ ಬಿಜೆಪಿ
ಚಂಢೀಗಢ: ಮಹಿಳಾ ಸೇನಾ ಅಧಿಕಾರಿಯ ವಜಾ
ಅವಿಧೇಯತೆ: ಮಹಿಳಾ ಸೇನಾಧಿಕಾರಿ ವಜಾ
ಕಳ್ಳಭಟ್ಟಿ ದುರಂತದ ಹಿಂದೆ ಭೂಗತ ಕೈವಾಡ?
ಮದ್ಯನಿಷೇಧ: ಗುಜರಾತ್ ಸರ್ಕಾರಕ್ಕೆ ಮಲ್ಯ ಬೋಧನೆ
45 ವರ್ಷಗಳ ಬಳಿಕವೂ ಶಾಸ್ತ್ರಿ ಸಾವು ನಿಗೂಢ