ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒರಿಸ್ಸಾ: ಸ್ವಾಮಿ ಅರುಪಾನಂದಾಗೆ ನಕ್ಸಲ್ ಕೊಲೆ ಬೆದರಿಕೆ (VHP | Maoist | Swami Arupananda | Orissa | Swami Arupananda)
Feedback Print Bookmark and Share
 
ವಿಎಚ್‌ಪಿ ಮುಖಂಡ ಸ್ವಾಮಿ ಲಕ್ಷ್ಮಣಾನಂದಾ ಸರಸ್ವತಿಯನ್ನು ಹತ್ಯೆಗೈದ ಹಾಗೆಯೇ ತನ್ನನ್ನೂ ಕೂಡ ಕೊಲ್ಲುವುದಾಗಿ ಮಾವೋವಾದಿಗಳು ಬೆದರಿಕೆಯ ಪತ್ರವನ್ನು ಬರೆದಿರುವುದಾಗಿ ಒರಿಸ್ಸಾದ ಸ್ವಾಮಿ ಅರುಪಾನಂದಾ ಶುಕ್ರವಾರ ತಿಳಿಸಿದ್ದಾರೆ.

ಸ್ವಾಮಿ ಅರುಪಾನಂದಾ ಅವರು ನಿಖಿಲ್ ಉತ್ಕಲ್ ಮಾತಾ-ಮಂದಿರಾಧೀಶ್ ಸೇವಾ ಸಂಘದ ಅಧ್ಯಕ್ಷರಾಗಿದ್ದು, ತನಗೆ ಮಾವೋವಾದಿ ಗೆರಿಲ್ಲಾಗಳು ಜೀವ ಬೆದರಿಕೆ ಪತ್ರ ಬರೆದಿರುವ ಬಗ್ಗೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತನಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿರುವುದಾಗಿ ಹೇಳಿದರು.

ಸ್ವಾಮಿ ಅರುಪಾನಂದಾ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಪನ್.ಕೆ.ಮೊಹಾಂತಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸ್ವಾಮಿ ಲಕ್ಷ್ಮಣಾನಂದಾ ಅವರನ್ನು ಹತ್ಯೆಗೈದಂತೆಯೇ ತನ್ನನ್ನು ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿ ಬರೆದಿರುವ ಪತ್ರ ಅಂಚೆ ಮೂಲಕ ತನ್ನ ಕೈಸೇರಿರುವುದಾಗಿ ಸ್ವಾಮಿ ಅರುಪಾನಂದಾ ವಿವರಿಸಿದ್ದಾರೆ.

ಕಳೆದ ವರ್ಷ ಕಂಧಮಾಲ್ ಜಿಲ್ಲೆಯಲ್ಲಿ ಮಾವೋವಾದಿಗಳು ವಿಶ್ವಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದಾ ಹಾಗೂ ಅವರ ನಾಲ್ಕು ಮಂದಿ ಅನುಯಾಯಿಗಳನ್ನು ಹತ್ಯೆಗೈದಿದ್ದರು. ಈ ಘಟನೆಯ ನಂತರ ಒರಿಸ್ಸಾ ಕೋಮುದಳ್ಳುರಿಯಿಂದ ಹೊತ್ತಿ ಉರಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ