ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಸಭಾ ಉಪಸಭಾಪತಿ ಕಾರು ಕಳವು (Rehaman Khan | Car | Parliment | Congress)
Feedback Print Bookmark and Share
 
ರಾಜ್ಯಸಭಾ ಉಪಸಭಾಪತಿ ಕೆ.ರೆಹಮಾನ್ ಖಾನ್ ಅವರ ರೇಡಿಯೊ ಸಂಕೇತ ಸಾಧನ ಅಳವಡಿಸಿದ್ದ ಜೀಪನ್ನು ಕಿಡಿಗೇಡಿಗಳು ಸೋಮವಾರ ನಸುಕಿನಲ್ಲಿ ಕಳವು ಮಾಡಿದ್ದಾರೆ.

ವಾಹನದ ಚಾಲಕ ಮಹಿಪಾಲ್‌ಪುರದ ತನ್ನ ಮನೆಯ ಬಳಿ ನಿಲ್ಲಿಸಿಕೊಂಡಿದ್ದ ಮಹೀಂದ್ರ ಬೊಲೆರೋವನ್ನು ಕಳವು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪಾರ್ಲಿಮೆಂಟ್ ಆವರಣ ಪ್ರವೇಶಿಸಲು ಅನುಕೂಲವಾಗುವಂತೆ ವಾಹನಕ್ಕೆ ಅಳವಡಿಸಿದ್ದ ರೇಡಿಯೋ ಸಂಕೇತ ಸಾಧನವನ್ನು ನಿಷ್ಕ್ರಿಯ ಮಾಡಲಾಗಿದೆ. ಕಿಡಿಗೇಡಿಗಳು ವಾಹನವನ್ನು ದುಷ್ಕೃತ್ಯಕ್ಕೆ ಬಳಸಿಕೊಳ್ಳಲು ಅವಕಾಶ ಆಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರೆಹಮಾನ್ ಖಾನ್ ಈಗ ಅಧಿಕೃತ ಪ್ರವಾಸದಲ್ಲಿದ್ದಾರೆ. ಅವರ ಕಾರಿಗೆ ಬೆಂಗಾವಲಿನ ವಾಹನವಾಗಿ ಇದನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ಚಾಲಕ ನಿರಂಜನ್ ಮೊಹಂತಿ ಭಾನುವಾರ ತಡರಾತ್ರಿ ಕೆಲಸ ಮುಗಿಸಿದ ನಂತರ ತಮ್ಮ ಮನೆಗೇ ವಾಹನವನ್ನು ತೆಗೆದುಕೊಂಡು ಹೋಗಿದ್ದರು. ಬೆಳಗಿನ ಜಾವ ಯಾರೋ ವಾಹನವನ್ನು ಚಾಲನೆ ಮಾಡಿದ ಸದ್ದು ಕೇಳಿ ಹೊರಗೆ ಬಂದರು. ಮತ್ತೊಂದು ವಾಹನದಲ್ಲಿ ಹಿಂಬಾಲಿಸಿ ತಡೆಯಲೂ ಯತ್ನಿಸಿದರೂ ಪ್ರಯೋಜನ ಆಗಿರಲಿಲ್ಲವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ