ಬೆಲೆ ಏರಿಕೆ ಹಾಗೂ ರಸಗೊಬ್ಬರ ಬಿಕ್ಕಟ್ಟನ್ನು ವಿರೋಧಿಸಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಬಿಜೆಪಿ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಧರಣಿಗಳನ್ನು ನಡೆಸಲಿದೆ.
ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ರಾಮ್ ತ್ರಿಪಾಟಿ ಅವರು ಡಿಸೆಂಬರ್ 4 ಹಾಗೂ 5ರಂದು ಧರಣಿ ನಡೆಸುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ ಎಂಬುದಾಗಿ ಪಕ್ಷದ ವಕ್ತಾರ ಹೃದಯ್ ನಾರಾಯಿನ್ ದೀಕ್ಷಿತ್ ತಿಳಿಸಿದ್ದಾರೆ.
ಆಡಳಿತಾರೂಢ ಬಿಎಸ್ಪಿ ಸರ್ಕಾರವು ಕಬ್ಬುಬೆಳೆಗಾರರ ಚಳುವಳಿ ಹಾಗೂ ರಸಗೊಬ್ಬರದ ಕಾಳಸಂತೆಗೆ ಕಾರಣ ಎಂದು ತ್ರಿಪಾಠಿ ದೂರಿದ್ದಾರೆ.
ಶಾಸಕರು, ಎಂಎಲ್ಸಿಗಳು ಮತ್ತು ಸಂಸದರೊಂದಿಗೆ ಪಕ್ಷದ ಹಿರಿಯ ನಾಯಕರೂ ಸಹ ಚಳುವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ದೀಕ್ಷಿತ್ ತಿಳಿಸಿದ್ದಾರೆ.