ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ವಿಶ್ವಾಸದ್ರೋಹ'ದ ಬಗ್ಗೆ ಪ್ರಧಾನಿಗೆ ಮಹೇಶ್‌ಭಟ್ ಪತ್ರ (Mahesh Bhatt | PM | Betrayal | Headley)
Feedback Print Bookmark and Share
 
ಶಂಕಿತ ಉಗ್ರ ಡೇವಿಡ್ ಹೆಡ್ಲಿ ಕುರಿತು ತನ್ನ ಪುತ್ರ ಮಾಹಿತಿ ನೀಡಿರುವ ಬಳಿಕ ಆ ವಿಚಾರವನ್ನು ನಿಭಾಯಿಸಿದ ರೀತಿಗೆ ಅಸಮಾಧಾನ ಸೂಚಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪತ್ರ ಬರೆದಿದ್ದಾರೆ.

"ತನ್ನ ಪುತ್ರ ಸ್ವಯಂ ಆಗಿ ಮಾಹಿತಿ ನೀಡಿರುವ ಬಳಿಕ ತನಿಖೆ ನಡೆಸಿರುವ ರೀತಿಗೆ ಪತ್ರದಲ್ಲಿ ತಾನು ತೀವ್ರ ಸಂಕಟ ವ್ಯಕ್ತಪಡಿಸಿದ್ದೇನೆ" ಎಂಬುದಾಗಿ ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಈ ರಾಷ್ಟ್ರದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿದ್ದು ಆತ ಏನು ಮಾಡಬೇಕೋ ಅದನ್ನು ಮಾಡಿದ್ದು, ಅದರ ಬಳಿಕ ತಾನು ಮತ್ತು ತನ್ನ ಕುಟುಂಬ ಏನೆಲ್ಲ ಅನುಭವಿಸಬೇಕಾಯಿತು ಎಂಬ ಸರಣಿ ಘಟನೆಗಳನ್ನು ತಾನು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಪಟ್ಟಿಮಾಡಿದ್ದೇನೆ" ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ