ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿ ಗಣಿ ಮಾಫಿಯಾ ಉಗ್ರರಿಗಿಂತ ಅಪಾಯ: ನಾಯ್ಡು (Janardana Reddy | Chandrababu naidu | Karnataka | Yeddyurappa)
Feedback Print Bookmark and Share
 
PTI
ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಓಬಳಾಪುರಂನಲ್ಲಿ ಗಣಿ ಮಾಫಿಯಾ ನಡೆಯುತ್ತಿದ್ದು ಇದು ನಕ್ಸಲಿಸಂ ಮತ್ತು ಭಯೋತ್ಪಾದಕರಿಗಿಂತ ಹೆಚ್ಚು ಅಪಾಯ ಎಂದು ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಮತ್ತೊಮ್ಮೆ ಕಿಡಿಕಾರಿದ್ದಾರೆ.

ಸರ್ವೋಚ್ಚನ್ಯಾಯಾಲಯದ ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ)ಓಬಳಾಪುರಂ ಮೈನಿಂಗ್ ವಿರುದ್ಧ ವರದಿ ಸಲ್ಲಿಸಿದ ಬಳಿಕ ಕರ್ನಾಟಕ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮತ್ತಷ್ಟು ಕಠೋರ ಶಬ್ದಳಿಂದ ವಾಗ್ದಾಳಿ ನಡೆಸಿದರು.

ಗಣಿ ಮಾಫಿಯಾ ನಿಯಂತ್ರಿಸುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅತ್ತು ತಮ್ಮ ಸ್ಥಾನಕ್ಕೆ ಕುಂದು ಬರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಗಣಿ ಮಾಫಿಯಾದಿಂದಲೇ ನಿಯಂತ್ರಣಕ್ಕೊಳಗಾಗಿದೆ ಎಂದು ಈ ಸಂದರ್ಭದಲ್ಲಿ ಕಟುವಾಗಿ ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ