ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಜಾ ಮಾಡಿ ರೇಪ್ ದೂರು: ಕಾಂಗ್ರೆಸ್ ಹೇಳಿಕೆಗೆ ಗದ್ದಲ (Shantaram L Naik | Scarlet | Goa | Rajya Sabha)
Bookmark and Share Feedback Print
 
ಕೆಲವು ಮಹಿಳೆಯರು ಯಾರೊಂದಿಗೋ ಮಧ್ಯರಾತ್ರಿ ಮಜಾ ಮಾಡಿ ನಂತರ ಅತ್ಯಾಚಾರವೆಸಗಲಾಗಿದೆ ಎಂದು ಯುವಕರ ವಿರುದ್ಧ ದೂರು ಕೊಡುತ್ತಾರೆ. ಇದರಿಂದ ಗೋವಾದ ಘನತೆ ಮಣ್ಣುಪಾಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಾಂತಾರಾಮ್ ಎಲ್ ನಾಯ್ಕ್ ಮಹಿಳೆಯರ ಬಗ್ಗೆ ತೀರಾ ಅವಹೇಳನಕಾರಿ ಪದಗಳನ್ನು ಬಳಸಿದ ಪ್ರಸಂಗ ರಾಜ್ಯಸಭೆಯಲ್ಲಿಂದು ನಡೆಯಿತು.

ರಷ್ಯನ್ ಮಹಿಳೆ ಅತ್ಯಾಚಾರ ಮತ್ತು ಸ್ಕಾರ್ಲೆಟ್ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಉದುರಿಸಿದ್ದರು.

ಇದರಿಂದ ಆಕ್ರೋಶಿತರಾದ ಸಿಪಿಐಎಂ ನಾಯಕಿ ಬೃಂದಾ ಕಾರಟ್, ಬಿಜೆಪಿ ಸದಸ್ಯರಾದ ನಜ್ಮಾ ಹೆಫ್ತುಲ್ಲಾ, ರವಿ ಶಂಕರ್ ಪ್ರಸಾದ್, ಮಾಯಾ ಸಿಂಗ್, ಸಮಾಜವಾದಿ ಸಂಸದರಾದ ಅಮರ್ ಸಿಂಗ್ ಮತ್ತು ಜಯಾ ಬಾಧುರಿ ಮುಂತಾದವರು ಒಕ್ಕೊರಲಿನಿಂದ ನಾಯ್ಕ್ ಅವರ ಅವಹೇಳನಕಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

ಕೆಲವು ಯುವತಿಯರು ಅಪರಿಚಿತರೊಂದಿಗೆ ತೆರಳಿ ಅವರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುತ್ತಾರೆ. ನಂತರ ಸಮಸ್ಯೆಗಳು ಎದುರಾದಾಗ ತಮ್ಮ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪುರುಷರ ಮೇಲೆ ದೂರು ನೀಡುತ್ತಾರೆ ಎಂದು ವಿದೇಶೀಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಇದರಿಂದಾಗಿ ಗೋವಾದ ಘನತೆ ಹಾಳಾಗುತ್ತಿದೆ, ಅಲ್ಲದೆ ಪ್ರವಾಸೋದ್ಯಮದ ಆದಾಯಕ್ಕೂ ಹೊಡೆತ ಬೀಳುತ್ತಿದೆ ಎಂದು ವಾದಿಸಿದ್ದರು.

ಈ ಸಂದರ್ಭದಲ್ಲಿ ಪಕ್ಷಾತೀತರಾಗಿ ಹಲವು ಮಹಿಳಾ ಸಂಸದರು ನಾಯ್ಕ್ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿವಾದಿತ ಹೇಳಿಕೆ ಬಗ್ಗೆ ಭಾರೀ ವಿರೋಧಗಳು ಕೇಳಿ ಬಂದ ಹಿನ್ನಲೆಯಲ್ಲಿ ಉಪಸಭಾಧ್ಯಕ್ಷ ಕೆ. ರೆಹಮಾನ್ ಖಾನ್, ಕಾಂಗ್ರೆಸ್ ಸಂಸದ ಮಹಿಳೆಯರ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಇತ್ತೀಚೆಗಷ್ಟೇ ಇದೇ ವಿಚಾರಕ್ಕೆ ಗೋವಾದ ರಾಜ್ಯ ಸಚಿವ ಚರ್ಚಿಲ್ ಅಲೆಮಾವೋ ಕೂಡ ಇಂತಹುದೇ ಆರೋಪ ಮಾಡಿದ್ದರು. ಗೋವಾ ಅತ್ಯಾಚಾರ ಮತ್ತು ಕೊಲೆಯ ರಾಜಧಾನಿಯಾಗುತ್ತಿದೆ ಎಂಬ ಮಾಧ್ಯಮಗಳ ಟೀಕೆ ಹಿನ್ನಲೆಯಲ್ಲಿ ಅವರು ಗರಂ ಆಗಿದ್ದರು.

ಗೋವಾದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸ್ಕಾರ್ಲೆಟ್ ಬಗ್ಗೆ ಮಾತನಾಡುತ್ತಾ, ಆಕೆ ಮುಂಜಾನೆ 4 ಗಂಟೆಗೆ ಬೀಚ್‌ನಲ್ಲಿನ ಗುಡಿಸಲಿನಲ್ಲಿ ಏನು ಮಾಡುತ್ತಿದ್ದಳು? ನನಗೂ ಐವರು ಹೆಣ್ಣು ಮಕ್ಕಳಿದ್ದಾರೆ. ಅವರು ರಾತ್ರಿ 11ರೊಳಗೆ ಮನೆ ಸೇರುತ್ತಾರೆ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ