ಅಯೋಧ್ಯೆಯ ರಾಮಮಂದಿರ ಭೂಮಿ ವಿವಾದದ ಅಲಹಾಬಾದ್ ತೀರ್ಪನ್ನು ಮುಂದೂಡಿದ್ದ ಸರ್ವೋಚ್ಚ ನ್ಯಾಯಾಲಯ ಇಂದು ಪ್ರಕರಣದ ವಿಚಾರಣೆ ನಡೆಸಲಿದೆ.
ಕಳೆದ ಸೆಪ್ಟೆಂಬರ್ 23ರಂದು ಹೊರಬೀಳಲಿದ್ದ ತೀರ್ಪಿಗೆ ತಡೆನೀಡಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರವೀಂದ್ರನ್ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟಂಬರ್ 28ಕ್ಕೆ ಮುಂದೂಡಿತ್ತು.
ಭೂ ವಿವಾದವನ್ನು ಮಾತುಕತೆ ಮೂಲಕ ಮುಂದುವರಿಯಬೇಕು ಎಂದು ಹಿಂದೂ ಮಹಾಸಭಾ ಸಂಧಾನ ಬೇಡಿಕೆಯನ್ನು ಮಂಡಿಸಿತ್ತು. ಆದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಸುನ್ನಿ ವಕ್ಫ್ ಮಂಡಳಿ ವಿರೋಧಿಸಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಅಯೋಧ್ಯೆ ತೀರ್ಪು ಕುರಿತಂತೆ ಇಂದು ವಿಚಾರಣೆ ನಡೆಯಲಿರುವುದರಿಂದ ದೇಶದಾದ್ಯಂತ ಭಾರಿ ಭದ್ರತೆ ಏರ್ಪಡಿಯಲಾಗಿದೆ. ಅಯೋಧ್ಯೆಯಲ್ಲೂ ಕೂಡಾ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.