ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟ್ರಸ್ಟ್ ಕಾರ್ಯಗಳಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ: ಸಿಎಂ (Sathya Sai Central Trust|Sathya Sai Baba dead | Puttaparthi | Kiran Kumar Reddy)
ಟ್ರಸ್ಟ್ ಕಾರ್ಯಗಳಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ: ಸಿಎಂ
ಹೈದ್ರಾಬಾದ್, ಭಾನುವಾರ, 24 ಏಪ್ರಿಲ್ 2011( 17:56 IST )
EVENT
ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮುಂದಿರುವಂತೆ, ಟ್ರಸ್ಟ್ನ ಅಭಿವೃದ್ಧಿ ಕಾರ್ಯಗಳ್ಲಲಿ ಸರಕಾರ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಘೋಷಿಸಿದ್ದಾರೆ.
ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಯಥಾರೀತಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ.ಮಂತ್ರಿ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಯಿಬಾಬಾ ಇಹಲೋಕ ತ್ಯಜಿಸಿದ ಹಿನ್ನೆಲೆಯಲ್ಲಿ, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ್ನು ಸರಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆ ಎನ್ನುವ ಉಹಾಪೋಹ ವರದಿಗಳು ವಿರಾಮ ಹಾಕಿದಂತಾಗಿದೆ.
ಟ್ರಸ್ಟ್ನ ಸದಸ್ಯರಲ್ಲಿ ಬಿಕ್ಕಟ್ಟು ಸೃಷ್ಠಿಯಾಗಿದೆ ಎನ್ನುವ ವರದಿಗಳ ಮಧ್ಯೆ ಸಿಎಂ ಹೇಳಿಕೆ ಹೊರಬಿದ್ದಿದೆ. ಟ್ರಸ್ಟ್ ಸದಸ್ಯರ ಬಿಕ್ಕಟ್ಟು ಕುರಿತಂತೆ ಉತ್ತರಿಸಲು ನಿರಾಕರಿಸಿದ್ದಾರೆ.