ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಆಪ್ತ ಸತ್ಯಜಿತ್, ಖಾಸಗಿ ವೈದ್ಯರಿಗೆ ಜೀವಬೆದರಿಕೆ (Sathya Sai Central Trust | Sathya Sai Baba's caregiver Satyajit | Dr Aiyar)
PR
ಶ್ರೀ ಸತ್ಯ ಸಾಯಿಬಾಬಾ ಅವರ ಆಪ್ತರಾದ ಸತ್ಯಜಿತ್ ಮತ್ತು ಖಾಸಗಿ ವೈದ್ಯರಾದ ಡಾ.ಅಯ್ಯರ್ ಅವರ ಜೀವಕ್ಕೆ ಬೆದರಿಕೆಯಿರುವುದರಿಂದ ಕೆಲ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವಂತೆ ರಾಜ್ಯದ ಗುಪ್ತಚರ ಇಲಾಖೆ ಸಲಹೆ ನೀಡಿದೆ.

ಸಾಯಿಬಾಬಾ ಅವರಿಗೆ ಆಪ್ತರಾಗಿದ್ದ ಕೆಲ ವ್ಯಕ್ತಿಗಳನ್ನು ಹತ್ಯೆ ಮಾಡಲು ಕೆಲ ದುಷ್ಟಶಕ್ತಿಗಳು ಪ್ರಯತ್ನಿಸುತ್ತಿದ್ದು, ಟ್ರಸ್ಟ್‌ನ ಎಲ್ಲಾ ಸದಸ್ಯರಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಸತ್ಯ ಸಾಯಿ ಟ್ರಸ್ಟ್‌ನ ಸದಸ್ಯರು ತಮ್ಮ ಬೆಂಬಲವನ್ನು ಸತ್ಯಜಿತ್ ಅವರಿಗೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದರಿಂದ ಅವರನ್ನು ಹತ್ಯೆ ಮಾಡಲು ಸಂಚುಗಳು ನಡೆದಿವೆ ಎನ್ನಲಾಗಿದೆ.

ಸಾಯಿಬಾಬಾ ಅವರಿಗೆ ಚಿಕಿತ್ಸೆ ನೀಡಿರುವ ಬಗ್ಗೆ ಯಾವುದೇ ವೈದ್ಯಕೀಯ ದಾಖಲೆಗಳನ್ನು ಉಳಿಸಿಕೊಂಡಿಲ್ಲ ಎಂದು ಅಪಾರ ಸಂಖ್ಯೆಯ ಭಕ್ತರು ಟೀಕಿಸಿದ್ದಾರೆ. ಕೆಲ ಭಕ್ತರು, ಡಾ.ಅಯ್ಯರ್ ಅವರಿಗೆ ಬೆದರಿಕೆ ಕರೆಗಳನ್ನು ಕೂಡಾ ಮಾಡಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.