ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ: ಅಬ್ಬರಿಸಿದ ಬಾಬಾ (Death for Corrupt | Baba Ramdev | Corruption | Black Money)
PTI
ವಿದೇಶದಲ್ಲಿ ರಾಶಿ ಬಿದ್ದಿರುವ ಕಪ್ಪು ಹಣ ವಾಪಸ್ ತರುವಂತೆ ಒತ್ತಾಯಿಸಿ ಆಮರಣಾಂತ ನಿರಶನ ಸತ್ಯಾಗ್ರಹ ನಡೆಸಿಯೇ ಸಿದ್ಧ ಎಂದು ಶುಕ್ರವಾರವೂ ಸ್ಪಷ್ಟವಾಗಿ ಹೇಳಿರುವ ಯೋಗ ಗುರು ಬಾಬಾ ರಾಮದೇವ್, ಭ್ರಷ್ಟಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶನಿವಾರ ನನ್ನ ಉಪವಾಸ ಸತ್ಯಾಗ್ರಹ ನಡೆದೇ ಸಿದ್ಧ ಎಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಬೆಂಬಲಿಗರ ಭಾರೀ ಜನಸಂದೋಹವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡುತ್ತಾ ತಿಳಿಸಿದ ರಾಮದೇವ್, ಹಸನ್ ಅಲಿ ಖಾನ್ ಮುಸ್ಲಿಂ, ಎ.ರಾಜಾ ಹಿಂದೂ ಅಂತ ಅವರ ವಿರುದ್ಧ ನಮ್ಮ ಹೋರಾಟವಲ್ಲ. ಭ್ರಷ್ಟಾಚಾರಿಗಳಿಗೆ ಯಾವುದೇ ಧರ್ಮವಿಲ್ಲ. ಇವರೆಲ್ಲರೂ ಅಧರ್ಮಿಗಳು. ಎಲ್ಲ ಭ್ರಷ್ಟ ಮಂತ್ರಿಗಳನ್ನೂ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ವಿದೇಶಗಳ ಬ್ಯಾಂಕ್ ಖಾತೆಗಳಲ್ಲಿ ಭಾರತದ ತೆರಿಗೆ ತಪ್ಪಿಸಿ, ಭಾರತೀಯ ಶ್ರೀಮಂತ ಕುಳಗಳು, ರಾಜಕಾರಣಿಗಳು ಅಕ್ರಮವಾಗಿ ಕೂಡಿಟ್ಟಿರುವ ಕಾಳಧನವನ್ನು ವಾಪಸ್ ತರಲೇಬೇಕು ಎಂದು ಒತ್ತಾಯಿಸಿ ರಾಮದೇವ್ ಅವರು ಶನಿವಾರದಿಂದ ದೆಹಲಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದಾರೆ. ತಮ್ಮ ಈ ಹೋರಾಟ ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಅಲ್ಲ ಅಥವಾ ಯಾವುದೇ ವ್ಯಕ್ತಿಯ ವಿರುದ್ಧವೂ ಅಲ್ಲ ಎಂದು ರಾಮದೇವ್ ಸ್ಪಷ್ಟಪಡಿಸಿದ್ದಾರೆ.

ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಈಗಾಗಲೇ ರಾಮದೇವ್ ಅವರಿಗೆ ಪ್ರಧಾನಿ ಮನವಿ ಮಾಡಿಕೊಂಡಿದ್ದು, ಕೇಂದ್ರ ಸರಕಾರವೇ ಅವರ ಈ ಹೋರಾಟದಿಂದ ಬೆಚ್ಚಿ ಬಿದ್ದಿದ್ದು, ಉಪವಾಸ ನಿಲ್ಲಿಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಸರಕಾರವನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ್ದ ಅಣ್ಣಾ ಹಜಾರೆ ಕೂಡ ಬಾಬಾ ರಾಮದೇವ್ ಹೋರಾಟಕ್ಕೆ ಬೆಂಬಲಿಸಿರುವುದರಿಂದ ಕೇಂದ್ರ ಸರಕಾರವು ಮತ್ತಷ್ಟು ಕಂಗೆಟ್ಟಿದೆ.
ಇವನ್ನೂ ಓದಿ