ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಧಾನ ಯಶಸ್ವಿ: ಉಪವಾಸ ಕೈ ಬಿಟ್ಟ ಬಾಬಾ ರಾಮದೇವ್ (Baba Ramdev | Fast | Sri Sri Ravi Shankar)
PTI
ಕಳೆದ ಒಂಬತ್ತು ದಿನಗಳಿಂದ ಉಫವಾಸ ಸತ್ಯಾಗ್ರಹ ಆರಂಭಿಸಿದ್ದ ಬಾಬಾ ರಾಮದೇವ್, ಗುರುಜಿ ಶ್ರೀ ರವಿಶಂಕರ ಅವರ ಸಲಹೆ ಮೇರೆಗೆ ನಿರಶನ ಅಂತ್ಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನೇಕ ಧಾರ್ಮಿಕ ಹಾಗೂ ಅಧ್ಯಾತ್ಮಿಕ ನಾಯಕರ ಸಮ್ಮುಖದಲ್ಲಿ ಬಾಬಾ ರಾಮದೇವ್ ಹಣ್ಣಿನ ರಸ ಸೇವಿಸಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ ಎಂದು ಶ್ರೀ ರವಿಶಂಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ

ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆಯುವಂತೆ ಒತ್ತಾಯಿಸಿ ಬಾಬಾ ರಾಮದೇವ್ ಕಳೆದ ಒಂಬತ್ತು ದಿನಗಳಿಂದ ನಿರಶನ ಆರಂಭಿಸಿದ್ದರು. ಹರಿದ್ವಾರದಲ್ಲಿರುವ ಆಶ್ರಮದಲ್ಲಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬಾಬಾ ಅವರನ್ನು ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಏತನ್ಮಧ್ಯೆ, ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದ ಜನತಾಪಕ್ಷದ ನಾಯಕ ಸುಬ್ರಮಣ್ಯಂ ಸ್ವಾಮಿ, ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಆದರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದರು.

ಹಿಂದಿನ ದಿನ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಒಂ ಪ್ರಕಾಶ್ ಚೌತಾಲಾ ಮತ್ತು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಆಸ್ಪತ್ರೆಗೆ ಭೇಟಿ ನೀಡಿ ಬಾಬಾ ಅವರ ಆರೋಗ್ಯವನ್ನು ವಿಚಾರಿಸಿದ್ದರು.

ಧಾರ್ಮಿಕ ನಾಯಕ ಮೊರಾರಿ ಬಾಪು ಕೂಡಾ, ರಾಮದೇವ್ ಅವರಿಗೆ ಉವವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸಿದ್ದರು.
ಇವನ್ನೂ ಓದಿ