ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾಗರಿಕ ಸಮಿತಿಯೇ ಭ್ರಷ್ಟರ ಸಮಿತಿ: ಹರಿಪ್ರಸಾದ್ (Baba ramdev | B.K.Hariprasad | Anna hazare)
ಕಪ್ಪು ಹಣ ವಾಪಸ್ ತರುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಾಬಾ ರಾಮದೇವ್ ಡೊಂಗಿ ಬಾಬಾ, ಮಹಾನ್ ಭ್ರಷ್ಟ ಎಂದು ಟೀಕಿಸಿದ ಎಐಸಿಸಿ ಪ್ರದಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್,ಲೋಕಪಾಲ ನಾಗರಿಕ ಸಮಿತಿಯೇ ಭ್ರಷ್ಟರ ಸಮಿತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಬಾ ರಾಮದೇವ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನಲೋಕಪಾಲ ನಾಗರಿಕ ಸಮಿತಿ ಒಂದು ಭ್ರಷ್ಟಾಚಾರ ಸಮಿತಿ. ಸಮಿತಿ ಸದಸ್ಯ ಶಾಂತಿಭೂಷಣ್ ಅತಿ ಭ್ರಷ್ಟ ಎಂದು ಕಿಡಿಕಾರಿದರು.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಬಗ್ಗೆ ನಮಗೆ ಗೌರವವಿದೆ.ಆದರೆ, ಸಮಿತಿಯಲ್ಲಿರುವ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಶಾಂತಿ ಭೂಷಣ್ ಆಸ್ತಿ ಸಾವಿರ ಕೋಟಿ ರೂಪಾಯಿಗಳಿಗೂ ಮೀರಿದೆ. ಆಸ್ತಿಯನ್ನು ಬಹಿರಂಗಪಡಿಸಲಿ ಎಂದು ಸಾವಲು ಎಸೆದರು.

ಬಾಬಾ ರಾಮದೇವ್ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ. ಯೋಗಗುರು ಸಾವಿರ ಕೋಟಿ ರೂಪಾಯಿ ಒಡೆಯನಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಪ್ಪು ಹಣ ಮರಳಿ ತರಲು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಇವನ್ನೂ ಓದಿ