ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ ಖನಿಜಗಳು ಸರ್ಕಾರದ ಆಸ್ತಿ: ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ ಖನಿಜಗಳು ಸರ್ಕಾರದ ಆಸ್ತಿ: ಹೈಕೋರ್ಟ್
ಭೂಗರ್ಭದಲ್ಲಿ ದೊರೆಯುವ ಯಾವುದೇ ಖನಿಜ ಸಂಪತ್ತಿರಲಿ ಅದು ಸರ್ಕಾರದ ಆಸ್ತಿ. ಇದರಲ್ಲಿ ಭೂಮಾಲೀಕರಿಗೆ ಯಾವುದೇ ರೀತಿಯ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಮಂಗಳವಾರ ತಿಳಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ 70ನೇ ಕಲಮಿನಲ್ಲಿ ಈ ಬಗ್ಗೆ ಉಲ್ಲೇಖವಾಗಿರುವುದಾಗಿ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರಮಠ ಹಾಗೂ ವೇಣುಗೋಪಾಲಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಈ ಕಾಯ್ದೆಯ ಆಧಾರದ ಮೇಲೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆಗಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಾಲೀಕರಿಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ಕೋರ್ಟ್ ನಿಗದಿ ಮಾಡಿದೆ.

ಅಲ್ಲದೇ ಭೂಕಂದಾಯ ಕಾಯ್ದೆಯ ಆಧಾರದ ಮೇಲೆ ಪರಿಹಾರ ಮೊತ್ತವನ್ನು ನಿಗದಿ ಮಾಡಿದ ಕೋರ್ಟ್, ಜಮೀನಿನ ಪ್ರತಿ ಎಕರೆಗೆ 25ಸಾವಿರ ರೂಪಾಯಿ ನೀಡುವಂತೆ ಭೂಸ್ವಾಧೀನ ಅಧಿಕಾರಿಗಳಿಗೆ ನಿರ್ದೇಶಿಸಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿಗೆ ಸಿದ್ಧರಾಮಯ್ಯ
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಶ್ರೀರಾಮಸೇನೆ ನಿಷೇಧದ ಬಗ್ಗೆ ಪರಿಶೀಲನೆ: ಸಿಎಂ
ಆಚಾರ್ಯ ಅಸಮರ್ಥ ಗೃಹಮಂತ್ರಿ: ಜನಾರ್ದನ ಪೂಜಾರಿ
'ಕೈ' ಬಿಡಲ್ಲ, ಮುಖ್ಯಮಂತ್ರಿ ಆಕಾಂಕ್ಷಿ ನಾನು: ಸಿದ್ದರಾಮಯ್ಯ
ಪಬ್ ದಾಳಿ: ಬೆಳಗಾವಿಯಲ್ಲಿ ಮುತಾಲಿಕ್ ಬಂಧನ