ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡಿಗರನ್ನು ಕೆಣಕಿದರೆ ತಕ್ಕ ಪಾಠ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗರನ್ನು ಕೆಣಕಿದರೆ ತಕ್ಕ ಪಾಠ: ಯಡಿಯೂರಪ್ಪ
ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಬದ್ದವಾಗಿದೆ, ಈ ವಿಷಯದಲ್ಲಿ ಯಾವುದೇ ಸಂಧಾನ ಇಲ್ಲ. ಆದರೆ ಕನ್ನಡಿಗರನ್ನು ಕೆಣಕಿ ಏನನ್ನು ಬೇಕಾದರು ಸಾಧಿಸುತ್ತೇವೆ ಎಂದು ಭಾವಿಸಿದರೆ ತಕ್ಕ ಪಾಠ ಕಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಐತಿಹಾಸಿಕ ದುರ್ಗದ ರಾಜಾ ವೀರಮದಕರಿ ನಾಯಕ ಮಹಾಮಂಟಪದಲ್ಲಿ ಬುಧವಾರ ಆರಂಭಗೊಂಡ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಆದ್ಯತೆ ಕನ್ನಡಕ್ಕೆ, ಐದುವರೆ ಕೋಟಿ ಕನ್ನಡಿಗರ ಸೇವಕ ನಾನು. ನಮ್ಮನ್ನು ಕೆಣಕಿ ಏನು ಬೇಕಾದರು ಸಾಧಿಸುತ್ತೇವೆಂಬ ಹುಂಬ ಹಠ ಬೇಡ, ನಮ್ಮ ಸ್ನೇಹಶೀಲತೆಯನ್ನು ಅರ್ಥಮಾಡಿಕೊಂಡು ಸಹಕರಿಸಿ ಎಂದು ನೆರೆಯ ರಾಜ್ಯಗಳಿಗೆ ಮನವಿ ಮಾಡಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಅನ್ಯ ರಾಜ್ಯಗಳ ಕನ್ನಡ ಅಧ್ಯಯನ ಪೀಠಗಳಿಗೆ ಅನುದಾನ, ಮಧುರೈ ಕಾಮರಾಜ್ ವಿ.ವಿ.ಯ ಕನ್ನಡ ವಿಭಾಗ ಮುಖ್ಯಸ್ಥರ ನೇಮಕ ಸೇರದಂತೆ ಹತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಪಂಗಿ ಲಂಚ ಪ್ರಕರಣ ನಾಚಿಕೆಗೇಡು: ಕೃಷ್ಣ
ರಾಜ್ಯ ಚಿತ್ರಕಲಾ ಶಿಕ್ಷಕರ ಸಮ್ಮೇಳನ
ವಿದ್ಯಾಭ್ಯಾಸ ರಾಷ್ಟ್ರೀಕರಣ ಮಾಡಿ: ಎಲ್.ಬಸವರಾಜು
ವಿಕಿಪೀಡಿಯ ಮಾದರಿ ಅಂತರ್ಜಾಲ ತಾಣ: ಸಿಎಂ
ನೈಸ್ ಪತ್ರ: ದೇವೇಗೌಡರಿಗೆ ಸುಪ್ರೀಂ ಛೀಮಾರಿ
ಯುವಕಾಂಗ್ರೆಸಿಗರ ಮೇಲೆ ಪೊಲೀಸ್ ಲಾಠಿಪ್ರಹಾರ