ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೊಯ್ಲಿಗೆ ವಿಳಾಸವೇ ಇಲ್ಲ: ಯಡಿಯೂರಪ್ಪ ವ್ಯಂಗ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಯ್ಲಿಗೆ ವಿಳಾಸವೇ ಇಲ್ಲ: ಯಡಿಯೂರಪ್ಪ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ ವಿಳಾಸವೇ ಇಲ್ಲ ಎಂದು ಕಟುವಾಗಿ ಟೀಕಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜಕೀಯ ಆಶ್ರಯವಿಲ್ಲದ ಕಾರಣ ಮೊಯ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಸರಿಯಾಗಿ ಅಧಿಕಾರ ನಡೆಸಲು ಯಡಿಯೂರಪ್ಪ ಮತ್ತು ಮಕ್ಕಳು ಬಿಡುತ್ತಿಲ್ಲ ಎಂಬ ಹೇಳಿಕೆ ನೀಡಿರುವ ಮೊಯ್ಲಿ ಬಗ್ಗೆ ಗೌರವವಿದೆ. ಆದರೆ ರಾಜಕೀಯ ಆಶ್ರಯವಿಲ್ಲ ಎಂಬ ಕಾರಣಕ್ಕೆ ಆ ಮಾಜಿ ಸಿಎಂ ಹೀಗೆ ಬಡಬಡಿಸುತ್ತಿದ್ದಾರೆ ಎಂದು ಕುಹಕವಾಡಿದರು.

ಇತ್ತೀಚೆಗಷ್ಟೇ ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಯ್ಲಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಗೃಹಸಚಿವ ಆಚಾರ್ಯ, ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅಲ್ಲದೇ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅಧಿಕಾರ ಚಲಾಯಿಸಲು ಅವರಿಗೆ ಮೂಗುದಾರ ಹಾಕಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರ್ಗಾವಣೆಯಲ್ಲಿ ಸಿಎಂ ಹಾಗೂ ಮಕ್ಕಳ ಕೈವಾಡವಿಲ್ಲ: ರವಿ
ಯಾರಿಗೂ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ
'ಬಸ್ಸಲ್ಲಿ ಗಲೀಜಿದ್ದರೆ ಒದೆಯಿರಿ':ಅಶೋಕ್ ಕ್ಷಮೆಗೆ ಪಟ್ಟು
ಶ್ರೀರಾಮುಲು ಪೈಗಂಬರ್ ಇದ್ದಂತೆ-ಸಚಿವ ಖಾನ್‌‌ಗೆ ಘೇರಾವ್
'ಪಿಂಕ್ ಚಡ್ಡಿ' ಕಳುಹಿಸಿದವರ ವಿರುದ್ಧ ಕಾನೂನು ಕ್ರಮ: ಮುತಾಲಿಕ್
ಕೆರೆಗಳ ಅಭಿವೃದ್ದಿಗೆ ಕ್ರಮ: ಕಾರಜೋಳ