ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವೇಗೌಡರ ಕುಟುಂಬಕ್ಕೆ ಚನ್ನಿಗಪ್ಪ ಪಂಥಾಹ್ವಾನ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡರ ಕುಟುಂಬಕ್ಕೆ ಚನ್ನಿಗಪ್ಪ ಪಂಥಾಹ್ವಾನ!
NRB
'ನನ್ನ ಜನರೇ ನನಗೆ ದೇವರು, ಮಾಜಿ ಪ್ರದಾನಿ ದೇವೇಗೌಡರ ಸೊಸೆ ನಿಂತ್ರೂ ಐ ಡೋಂಟ್ ಕೇರ್ ಸ್ವಾಮಿ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಡಲಿ ರಾಮನಗರದಿಂದ ಸ್ಪರ್ಧಿಸಲು ರೆಡಿ'...ಇದು ಮಧುಗಿರಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಚನ್ನಿಗಪ್ಪ ಬಿರುಸಿನ ನುಡಿ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನೀಡಿದ್ದಾರೆ. ಇದೀಗ ತೆರವಾಗಿರುವ ರಾಮನಗರ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಚನ್ನಿಗಪ್ಪ ಅವರು ಮಾತನಾಡಿದ ರೀತಿ ಇದು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಯಾರೇ ಸ್ಪರ್ಧಿಸಲಿ, ನಾನು ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ ಅವರು, ಮುಖ್ಯಮಂತ್ರಿಗಳು ಆದೇಶ ನೀಡಲಿ ನಾನು ಸ್ಪರ್ಧಿಸಿಯೇ ಸಿದ್ಧ. ನಾನೇನು ಗೌಡರ ಕುಟುಂಬಕ್ಕೆ ಹೆದರಲಾರೆ ಎಂದರು.

NRB
ಆದರೆ ರಾಮನಗರ ಕ್ಷೇತ್ರದಿಂದ ಬೇರೆ ಅಭ್ಯರ್ಥಿಗಳು ಸ್ಪರ್ಧಿಸಿದರೆ ತಾನು ಕಣಕ್ಕಿಳಿಯಲಾರೆ ಎಂದಿರುವ ಚನ್ನಿಗಪ್ಪ, ತನ್ನದು ಗೌಡರ ಕುಟುಂಬದ ವಿರುದ್ಧ ಹೋರಾಟ ಎಂದು ಹೇಳಿದರು.

ತಾನು ಗೌಡರ ಮನೆಯ ನಾಯಿ ಇದ್ದಂತೆ ಎಂಬ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದ ಚನ್ನಿಗಪ್ಪ, ಜೆಡಿಎಸ್ ತೊರೆಯಲಾರೆ ಎಂದು ಹೇಳಿಕೆ ನೀಡಿದ ನಂತರ, ವಾಚಾಮಗೋಚರವಾಗಿ ಬೈಯುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಮಧುಗಿರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾಕುಮಾರಸ್ವಾಮಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಬಿಎಂಪಿ ವಾರ್ಡ್ ಹೆಚ್ಚಳಕ್ಕೆ ರಾಜ್ಯಪಾಲರ ಆಕ್ಷೇಪ
ಕಾಂಗ್ರೆಸ್ ಅಗತ್ಯ ನಮಗಿಲ್ಲ: ಕುಮಾರಸ್ವಾಮಿ ಕಿಡಿ
ಹೃದಯಾಘಾತದಿಂದ ಕೊಂಡಜ್ಜಿ ಸಾವು: ವೈದ್ಯರ ವರದಿ
ಮತ್ತೆ ಸಿಎಂ ಉಲ್ಟಾ: ಸಂಪುಟ ಪುನಾರಚನೆ ಇಲ್ಲ
ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ಐಶ್ವರ್ಯ ಪ್ರಥಮ
ಕಾರ್ಮಿಕ ಜೀವನ...ಸಚಿವಗಿರಿಯ ಖರ್ಗೆ ಸಾಧನೆ...