' ನನ್ನ ಜನರೇ ನನಗೆ ದೇವರು, ಮಾಜಿ ಪ್ರದಾನಿ ದೇವೇಗೌಡರ ಸೊಸೆ ನಿಂತ್ರೂ ಐ ಡೋಂಟ್ ಕೇರ್ ಸ್ವಾಮಿ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಡಲಿ ರಾಮನಗರದಿಂದ ಸ್ಪರ್ಧಿಸಲು ರೆಡಿ'...ಇದು ಮಧುಗಿರಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಚನ್ನಿಗಪ್ಪ ಬಿರುಸಿನ ನುಡಿ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನೀಡಿದ್ದಾರೆ. ಇದೀಗ ತೆರವಾಗಿರುವ ರಾಮನಗರ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಚನ್ನಿಗಪ್ಪ ಅವರು ಮಾತನಾಡಿದ ರೀತಿ ಇದು.ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಯಾರೇ ಸ್ಪರ್ಧಿಸಲಿ, ನಾನು ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ ಅವರು, ಮುಖ್ಯಮಂತ್ರಿಗಳು ಆದೇಶ ನೀಡಲಿ ನಾನು ಸ್ಪರ್ಧಿಸಿಯೇ ಸಿದ್ಧ. ನಾನೇನು ಗೌಡರ ಕುಟುಂಬಕ್ಕೆ ಹೆದರಲಾರೆ ಎಂದರು. ಆದರೆ ರಾಮನಗರ ಕ್ಷೇತ್ರದಿಂದ ಬೇರೆ ಅಭ್ಯರ್ಥಿಗಳು ಸ್ಪರ್ಧಿಸಿದರೆ ತಾನು ಕಣಕ್ಕಿಳಿಯಲಾರೆ ಎಂದಿರುವ ಚನ್ನಿಗಪ್ಪ, ತನ್ನದು ಗೌಡರ ಕುಟುಂಬದ ವಿರುದ್ಧ ಹೋರಾಟ ಎಂದು ಹೇಳಿದರು.ತಾನು ಗೌಡರ ಮನೆಯ ನಾಯಿ ಇದ್ದಂತೆ ಎಂಬ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದ ಚನ್ನಿಗಪ್ಪ, ಜೆಡಿಎಸ್ ತೊರೆಯಲಾರೆ ಎಂದು ಹೇಳಿಕೆ ನೀಡಿದ ನಂತರ, ವಾಚಾಮಗೋಚರವಾಗಿ ಬೈಯುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಮಧುಗಿರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ಅನಿತಾಕುಮಾರಸ್ವಾಮಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. |