ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಘರ್ಷ ಬೇಡ;ಕಾಂಗ್ರೆಸ್ ಸಚಿವರಿಗೆ ಸಿಎಂ ಕಿವಿಮಾತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಘರ್ಷ ಬೇಡ;ಕಾಂಗ್ರೆಸ್ ಸಚಿವರಿಗೆ ಸಿಎಂ ಕಿವಿಮಾತು
ಸಂಘರ್ಷದ ಕಾಲ ಇದಲ್ಲ, ಐದು ವರ್ಷ ಒಟ್ಟಾಗಿ ಕೆಲಸ ಮಾಡೋಣ. ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಕೇಂದ್ರದಲ್ಲಿರುವ ರಾಜ್ಯದ ಕಾಂಗ್ರೆಸ್ ಸಚಿವರಿಗೆ ತಾವು ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅವರು ಶುಕ್ರವಾರ ನಗರದಲ್ಲಿ ಭಾರತ ವಿಚಾರ ವೇದಿಕೆಯ ಸ್ಥಾಪಿಸಿರುವ ನೂತನ ಯಾಗ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ತಾವು ಈ ಸಂಬಂಧ ಮಾತನಾಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿನ ಹಿತಾಸಕ್ತಿಯ ಸಂಬಂಧ ಪಕ್ಷ ಬೇಧ ಮರೆತು ಹೋರಾಡೋಣ ಎಂದ ಅವರು, ರಾಜ್ಯದ ಅಭಿವೃದ್ಧಿಯ ಸಂಬಂಧ ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ ಯಡಿಯೂರಪ್ಪ, ಪ್ರಧಾನಿ ಅವರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂದರು.

ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಒಂದು ವರ್ಷಕಾಲ ಆಡಳಿತ ನಡೆಸಿದೆ. ಇದರಲ್ಲಿ ಮೂರು ತಿಂಗಳ ಕಾಲ ಚುನಾವಣೆಯಲ್ಲಿ ಕಾಲ ಕಳೆದಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದಾಗಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರ ಕುಟುಂಬಕ್ಕೆ ಚನ್ನಿಗಪ್ಪ ಪಂಥಾಹ್ವಾನ!
ಬಿಬಿಎಂಪಿ ವಾರ್ಡ್ ಹೆಚ್ಚಳಕ್ಕೆ ರಾಜ್ಯಪಾಲರ ಆಕ್ಷೇಪ
ಕಾಂಗ್ರೆಸ್ ಅಗತ್ಯ ನಮಗಿಲ್ಲ: ಕುಮಾರಸ್ವಾಮಿ ಕಿಡಿ
ಹೃದಯಾಘಾತದಿಂದ ಕೊಂಡಜ್ಜಿ ಸಾವು: ವೈದ್ಯರ ವರದಿ
ಮತ್ತೆ ಸಿಎಂ ಉಲ್ಟಾ: ಸಂಪುಟ ಪುನಾರಚನೆ ಇಲ್ಲ
ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ಐಶ್ವರ್ಯ ಪ್ರಥಮ