ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: ಕೋಮುದ್ವೇಷಕ್ಕೆ ಯುವಕ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: ಕೋಮುದ್ವೇಷಕ್ಕೆ ಯುವಕ ಬಲಿ
ಕರಾವಳಿ ಪ್ರದೇಶದಲ್ಲಿ ಮತ್ತೆ ಕೋಮುದ್ವೇಷದ ನೆತ್ತರು ಹರಿದಿದ್ದು, ನಗರದ ಜೆಪ್ಪು ಕುಡುಪಾಡಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಾಯಾಳು ಶುಕ್ರವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅನ್ಯಕೋಮಿನ ಗುಂಪೊಂದು ಈ ಘಟನೆ ನಡೆಸಿರಬಹುದು ಎಂದು ವದಂತಿ ಹಬ್ಬಿದ ಪರಿಣಾಮ ಜೆಪ್ಪು ಪರಿಸರದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾವನ್ನ ಪ್ಪಿರುವ ಯುವಕನನ್ನು ಮೋರ್ಗನ್ಸ್ ಗೇಟ್‌ನ ಹಣ್ಣಿನ ಅಂಗಡಿಯ ಮಾಲೀಕ, ನೀರುಮಾರ್ಗದ ಭದ್ರಕೋಡಿ ನಿವಾಸಿ ಚೇತನ್ ಶೆಟ್ಟಿ(26) ಎಂದು ಗುರುತಿಸಲಾಗಿದೆ.

ಚೇತನ್ ಅಂಗಡಿಯಲ್ಲಿದ್ದಾಗ ಮಾರುತಿ ಓಮ್ಮಿ ಕಾರಿನಲ್ಲಿ ಆಗಮಿಸಿದ ತಂಡ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಮುಂಜಾನೆ ಚೇತನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.

ಕಳೆದ 21ರಂದು ರಾತ್ರಿ ಮಾರ್ನಮಿಕಟ್ಟೆಯ ನಿವಾಸಿ ಮೊಹಮ್ಮದ್ ಅಶ್ರಫ್ ಮೇಲೆ ದುಷ್ಕರ್ಮಿಗಳ ಗುಂಪು ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು. ಅಂದು ಹಲ್ಲೆ ನಡೆಸಿದವರು ಆಗಾಗ ಚೇತನ್ ಅಂಗಡಿ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು, ಹೀಗಾಗಿ ಆ ಗುಂಪಿಗೂ ಚೇತನ್‌ಗೂ ಸಂಬಂಧ ಇರಬಹುದೆಂಬ ಕಾರಣಕ್ಕೆ, ಪ್ರತೀಕಾರವಾಗಿ ಮೊಹಮ್ಮದ್ ಅಶ್ರಫ್ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಶ್ರಫ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತಾರಾಜ್ಯ ಕಳ್ಳರ ಸೆರೆ: 60ವಾಹನ ವಶ
ಸಂಘರ್ಷ ಬೇಡ;ಕಾಂಗ್ರೆಸ್ ಸಚಿವರಿಗೆ ಸಿಎಂ ಕಿವಿಮಾತು
ದೇವೇಗೌಡರ ಕುಟುಂಬಕ್ಕೆ ಚನ್ನಿಗಪ್ಪ ಪಂಥಾಹ್ವಾನ!
ಬಿಬಿಎಂಪಿ ವಾರ್ಡ್ ಹೆಚ್ಚಳಕ್ಕೆ ರಾಜ್ಯಪಾಲರ ಆಕ್ಷೇಪ
ಕಾಂಗ್ರೆಸ್ ಅಗತ್ಯ ನಮಗಿಲ್ಲ: ಕುಮಾರಸ್ವಾಮಿ ಕಿಡಿ
ಹೃದಯಾಘಾತದಿಂದ ಕೊಂಡಜ್ಜಿ ಸಾವು: ವೈದ್ಯರ ವರದಿ