ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಜತಿನಾ ಜಾರ್ಜ್ ಎಂಬಾಕೆಯನ್ನು ಸಹೋದ್ಯೋಗಿ ಧರ್ಮಪುರಿಯ ಪಳನಿ ಎಂಬಾತ ಕೊಲೆಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಜತಿನಾಳನ್ನು ಕೊಲೆಗೈಯ್ಯಲು ಪಳನಿಯ ಭಗ್ನ ಪ್ರೀತಿಯೇ ಕಾರಣ ಎಂದು ಶಂಕಿಸಲಾಗಿದೆ. ಜತಿನಾಳನ್ನು ಮದುವೆಯಾಗಲು ಮೂರು ತಿಂಗಳಿನಿಂದ ಪಳನಿ ಪೀಡಿಸುತ್ತಿದ್ದ. ಈ ಬಗ್ಗೆ ಜತಿನಾಳ ಕುಟುಂಬದವರಿಗೂ ತಿಳಿದಿತ್ತು. ಅವಳ ಕುಟುಂಬದವರು ಆಸ್ಪತ್ರೆಯವರಿಗೂ ಮೊದಲೇ ದೂರು ನೀಡಿದ್ದಾಗಿ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಸ ಗುಡಿಸಲು ಬಂದ ಆಸ್ಪತ್ರೆ ಕೆಲಸಗಾರನೊಬ್ಬ ಜಿತಿನ್ ಕೆಳಗೆ ಬಿದ್ದಿರುವುದನ್ನು ಗಮನಿಸಿ ಆಸ್ಪತ್ರೆ ವ್ಯವಸ್ಥಾಪಕರಿಗೆ ವಿಷಯ ಮುಟ್ಟಿಸಿದ್ದಾನೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕುತ್ತಿಗೆಗೆ ಬಿಗಿದಿದ್ದ ವಯರ್ ಸಮೀಪದಲ್ಲೆ ಬಿದ್ದಿತ್ತು. ಪಳನಿ ವಯರ್ನಿಂದ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ದುರ್ಘಟನೆ ಗುರುವಾರ ರಾತ್ರಿ ನಡೆದಿದ್ದು, ಈ ಘಟನೆಯ ಎಲ್ಲಾ ಮಾಹಿತಿ ಕೊಠಡಿಯಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿ ಟವಿ ವಿಡಿಯೋ ಚಿತ್ರಿಕರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. |