ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಾಡೂಟದಲ್ಲಿ ಬಿಬಿಎಂಪಿ ಕೈವಾಡವಿಲ್ಲ: ನೌಕರರ ಸಂಘ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಡೂಟದಲ್ಲಿ ಬಿಬಿಎಂಪಿ ಕೈವಾಡವಿಲ್ಲ: ನೌಕರರ ಸಂಘ
ಇತ್ತೀಚೆಗೆ ವಿವಾದಕ್ಕೆ ಒಳಗಾಗಿರುವ ಬಿಬಿಎಂಪಿ ಬಾಡೂಟ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತ ಡಾ.ಸುಬ್ರಮಣ್ಯ ಅವರ ಯಾವುದೇ ಕೈವಾಡ ಇಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕೇಂದ್ರೀಯ ಸಂಘ ಬುಧವಾರ ಸ್ಪಷ್ಟಪಡಿಸಿದೆ.

ಅಂದು ಬಾಡೂಟವನ್ನು ನೌಕರರ ಕೇಂದ್ರೀಯ ಸಂಘವೇ ಏರ್ಪಡಿಸಿತ್ತಾದರೂ ಸಂಘದ ಯಾರೊಬ್ಬರೊಂದಿಗೂ ಸಭೆ ನಡೆಸದೆ ಸಂಘದ ಅಧ್ಯಕ್ಷ ಆರ್. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಕುಮಾರ್ ಹಾಗೂ ಬಸವರಾಜ್ ಅವರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಈ ಕಾರ್ಯಕ್ರಮ ನಿಗದಿಪಡಿಸಿದ್ದಾರೆ. ಈ ಬಗ್ಗೆ ಸಂಘದ ಇತರ ಸದಸ್ಯರಿಗೆ ಏನು ತಿಳಿದಿರಲಿಲ್ಲ ಎಂದು ಸಂಘದ ಖಜಾಂಚಿ ಚ.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೌಕರರ ಕೇಂದ್ರೀಯ ಸಂಘದಿಂದ ಬಾಡೂಟ ಕಾರ್ಯಕ್ರಮ ಏರ್ಪಡಿಸಿ, ಕಾರ್ಯಕ್ರಮದ ಹೆಚ್ಚಿನ ಮೊತ್ತವನ್ನು ಕಂದಾಯ ಇಲಾಖೆ ಕಾರ್ಯನಿರ್ವಾಹಕ ನೌಕರರ ಸಂಘದಿಂದ ಭರಿಸಲಾಗಿದೆ. ಈ ಎರಡೂ ಸಂಘಕ್ಕೂ ಬಿ.ಆರ್.ಶಿವಕುಮಾರ್ ಅವರು ಪ್ರಧಾನ ಕಾರ್ಯದರ್ಶಿಯಾಗಿರುವುದರಿಂದ ಎರಡೂ ಸಂಘವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನನ್ನ ಹೇಳಿಕೆಯನ್ನೇ ತಿರುಚಲಾಗಿದೆ: ಕೆ.ಎಸ್.ಈಶ್ವರಪ್ಪ
ಬಳ್ಳಾರಿ ಗಣಿಧಣಿಗಳಿಗೆ ಆಂಧ್ರ ಸಿಎಂ ಕುಮ್ಮಕ್ಕು?
ಮೆಟ್ರೋ ಆರಂಭವಾದ್ರೆ ವಾಹನ ದಟ್ಟಣೆಗೆ ಕಡಿವಾಣ: ಸರ್ಕಾರ
ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ: ಅಶೋಕ್
ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಡಿಕೆಶಿ
ಹಣ-ಹೆಂಡ ಹಂಚಿಕೆ ಆರೋಪ: ಈಶ್ವರಪ್ಪಗೆ ನೋಟಿಸ್