ಇಂಧನ ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿಗಳ ನಡುವಿನ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದ್ದು, ಗಣಿಧಣಿಗಳು ಸಮರ ಸಾರಲು ಹೊರಟಿದ್ದಾರೆ. ಯಡಿಯೂರಪ್ಪನವರೆ ನಮ್ಮ ಸರ್ವೋಚ್ಚ ನಾಯಕರು ಎನ್ನುತ್ತಿದ್ದ ರೆಡ್ಡಿ ನಾಯಕರು ಮುಖ್ಯಮಂತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನಗೊಂಡಿರುವ ಅವರು ಅತೃಪ್ತರ ಸಭೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳ ನಡುವಿನ ಭಿನ್ನಾಭಿಪ್ರಾಯವೇ ಈ ಸಭೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ನಡೆದ ಸಭೆಯಲ್ಲಿ 20ರಿಂದ ಮೂವತ್ತು ಶಾಸಕರು ಭಾಗವಹಿಸಿದ್ದರು ಎನ್ನಲಾಗಿದ್ದು, ಸದ್ಯದಲ್ಲೆ ಮತ್ತೊಂದು ಸಭೆ ನಡೆಸುವ ಸೂಚನೆ ಇದೆ.
ರೆಡ್ಡಿ ಸಹೋದರರು ಮುಖ್ಯಮಂತ್ರಿಗಳಿಗೆ ಕರುಣಾಕರ ರೆಡ್ಡಿ ಅವರ ಸಚಿವ ಖಾತೆಯನ್ನು ಬದಲಿಸಬೇಕು ಎಂದು ಪಟ್ಟು ಹಿಡಿದ್ದಿದ್ದಾರೆ. ಕರುಣಾಕರ ರೆಡ್ಡಿ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದು ರೆಡ್ಡಿ ಸಹೋದರರ ಬೇಡಿಕೆಯಾಗಿದೆ. ಹಾಗೆ ಗೃಹ ಖಾತೆಯನ್ನು ಕರುಣಾಕರ ರೆಡ್ಡಿ ಅವರಿಗೆ ಕೊಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಡಲು ಸಿದ್ಧತೆ ನಡೆಸಿದ್ದಾರೆ. ಜೂ. 5ರಂದು ತಮ್ಮ ಶಾಸಕರ ಮತ್ತೊಂದು ಸಭೆ ನಡೆಸಲು ರೆಡ್ಡಿ ಸಹೋದರರು ಉದ್ದೇಶಿಸಿದ್ದಾರೆ ಎನ್ನಲಾಗಿದೆ. |