'ಆ ಪುಣ್ಯಾತ್ಮನಿಗೆ ಓದುವುದಕ್ಕೆ, ಬರೆಯಲಿಕ್ಕೆ ಬರುವುದಿಲ್ಲ, ಮಾಹಿತಿಯ ಕೊರತೆಯಿಂದಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ...ಇದು ಬಿಜೆಪಿ ಶಾಸಕ ಗೋಪಾಲಕೃಷ್ಣ ವಿರುದ್ಧ ಅವರದೇ ಪಕ್ಷದ ಸಚಿವ ಹರತಾಳ ಹಾಲಪ್ಪ ಕಿಡಿಕಾರಿದ ಪರಿ ಇದು!.
ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಹೇಳಿಕೆ ನೀಡಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವರ್ತನೆಯನ್ನು ಖಂಡಿಸಿ, ಇದು ಅವರ ಅಪ್ರಬುದ್ದತೆಗೆ ಸಾಕ್ಷಿ ಆಗಿದೆ ಎಂದು ಹೇಳಿದರು.
ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಮತಗಳು ಬಂದಿವೆ. ಆದರೆ ತಾವು ನಿರೀಕ್ಷಿಸಿದಷ್ಟು ಲೀಡ್ ಬಂದಿಲ್ಲ, ಇದರ ಬಗ್ಗೆ ತಮಗೆ ನೋವಿದೆ ಎಂದರು.
ಓದುವುದಕ್ಕೆ, ಬರೆಯುವುದಕ್ಕೆ ಬಾರದ ಎಷ್ಟೋ ಜನರು ದೇಶವನ್ನು ಆಳಿದ್ದಾರೆ. ಆದರೆ ಅವರು ಬರೆಯುವವರಿಂದ ತಿಳಿದು ಯಶಸ್ವಿ ಆಡಳಿತ ನಡೆಸಿದ್ದಾರೆ. ಗೋಪಾಲಕೃಷ್ಣ ಬೇಳೂರು ಇದನ್ನು ಅರಿತುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು. |