ಕಳೆದ ನಾಲ್ಕು ದಿನಗಳ ಹಿಂದೆ ಮೋರಿಯಲ್ಲಿ ಕೊಚ್ಚಿ ಹೋದ ಬಾಲಕ ಅಭಿಷೇಕ್ ಮೃತದೇಹ ಪತ್ತೆ ಮಾಡುವಲ್ಲಿ ವಿಫಲವಾಗಿರುವ ಬಿಬಿಎಂಪಿ ಈ ಜವಾಬ್ದಾರಿಯನ್ನು ಎಂಇಜಿ ಯೋಧರಿಗೆ ವಹಿಸಲು ತೀರ್ಮಾನಿಸಿದೆ.
ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಲಿಂಗರಾಜಪುರದ 5ವರ್ಷದ ಬಾಲಕ ಅಭಿಷೇಕ್ ತಾಯಿಯೊಂದಿಗೆ ಆಗಮಿಸುತ್ತಿದ್ದ ವೇಳೆ ಬಲವಂತವಾಗಿ ಕೈಬಿಡಿಸಿಕೊಂಡು ಓಡುತ್ತಿದ್ದಾಗ ಆಕಸ್ಮಿಕವಾಗಿ ಮೋರಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ.
ಬಾಲಕನ ಮೃತದೇಹ ಪತ್ತೆ ಮಾಡಲು ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗದ ಕಾರಣ ಈ ಕೆಲಸವನ್ನು ಎಂಇಜಿ ಯೋಧರಿಗೆ ವಹಿಸಲು ಪಾಲಿಕೆ ತೀರ್ಮಾನಿಸಿದೆ. ಬಾಲಕ ಮೋರಿಗೆ ಬಿದ್ದ ಸ್ಥಳದಿಂದ, ಮೋರಿ ನೀರು ಯಾವ್ಯಾವ ಕೆರೆಗೆ ಹರಿದು ಹೋಗುತ್ತದೆ ಎಂಬುದನ್ನು ಪತ್ತೆ ಮಾಡಿ, ಅಲ್ಲೆಲ್ಲಾ ಶೋಧ ಕಾರ್ಯಾಚರಣೆ ನಡೆಸಿ, ಮೃತದೇಹ ಪತ್ತೆ ಮಾಡುವಂತೆ ಯೋಧರಿಗೆ ಸೂಚಿಸಲಾಗಿದೆ. |