ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷದ ಸೋಲಿಗೆ ಹೈಕಮಾಂಡ್ ಹೊಣೆ: ಬಂಗಾರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷದ ಸೋಲಿಗೆ ಹೈಕಮಾಂಡ್ ಹೊಣೆ: ಬಂಗಾರಪ್ಪ
NRB
ಲೋಕಸಭೆ ಚುನಾವಣೆಯಲ್ಲಿ ತಾನು ಹೇಳಿದ ರೀತಿಯಲ್ಲಿ ಚುನಾವಣೆ ನಡೆಸದೆ ಇರುವುದೇ ಕಾಂಗ್ರೆಸ್ ಪಕ್ಷ ಅತಿ ಕಡಿಮೆ ಫಲಿತಾಂಶ ಪಡೆಯಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಸಾಧಿಸಲು ಪಕ್ಷದ ಹೈಕಮಾಂಡ್ ಕೂಡ ನೇರ ಹೊಣೆ ಎಂದು ಅವರು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 26 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ 8 ಸ್ಥಾನಗಳಿಸಿದ್ದ ಕಾಂಗ್ರೆಸ್ ಪಕ್ಷ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇವಲ 6 ಸ್ಥಾನ ಗಳಿಸಿದೆ. ಇದೊಂದು ನಾಚಿಕೆ ಪಡುವಂತಹ ವಿಷಯ ಎಂದರು. ಹಾಗೆ ಕಾಂಗ್ರೆಸ್ ಪಕ್ಷ ಗೆದ್ದಿದ್ದು 6 ಸ್ಥಾನವಾದರು ಕೇಂದ್ರದಲ್ಲಿ 4 ಮಂತ್ರಿಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಂತಸದ ಸಂಗತಿ ಎಂದಿದ್ದಾರೆ.

"ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಬೇಕಾದರೆ ಕೆಲವೊಂದು ವ್ಯವಸ್ಥೆಯನ್ನು ಅನುಸರಿಸಬೇಕು ಎಂದಿದ್ದೆ. ಆದರೆ ಪಕ್ಷ ಆ ವ್ಯವಸ್ಥೆ ಅನುಸರಿಸದೆ ಇರುವುದೇ ಪಕ್ಷದ ಹೀನಾಯ ಸೋಲಿಗೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ಸ್ವಲ್ಪ ಗಮನ ವಹಿಸಿದ್ದರೆ 15 ಸ್ಥಾನಗಳಲ್ಲಿ ಗೆಲ್ಲಬಹುದಾಗಿತ್ತು" ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರೀಯ ಪಕ್ಷಗಳನ್ನು ಮ‌ೂಲೆಗೆ ತಳ್ಳುವೆ: ಕುಮಾರ್
ಬಿಜೆಪಿ ಸರ್ಕಾರದ ದುರಾಡಳಿತ ಎತ್ತಿ ಹಿಡಿಯುವೆ: ಸಿದ್ದು
ಸಿಎಂ ಮೋಸಗಾರ: 'ಚರಂಡಿಯಿಂದ' ಹೊರಬಿದ್ದ ವರ್ತೂರು
ವಿ ಸೋಮಣ್ಣಗಾಗಿ ಕೃಷ್ಣಯ್ಯಶೆಟ್ಟಿ ತಲೆಂಡ?
ದಳ 'ರಕ್ಷಕ' ಕುಮಾರ, 2011ರಲ್ಲಿ ಅಧಿಕಾರಕ್ಕೆ: ಗೌಡ
ನಾವು ಉನ್ನತ ಹುದ್ದೆಗಳ ಅಕಾಂಕ್ಷಿಗಳಲ್ಲಾ :ಕರುಣಾಕರ ರೆಡ್ಡಿ