ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಂಗಾರಪ್ಪ ಬಾಯಿಗೆ ಬಂದಂತೆ ಮಾತಾಡದಿರಲಿ: ಬಿವೈಆರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾರಪ್ಪ ಬಾಯಿಗೆ ಬಂದಂತೆ ಮಾತಾಡದಿರಲಿ: ಬಿವೈಆರ್
NRB
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮಾತಿನ ಶೈಲಿ ಬದಲಿಸಿಕೊಳ್ಳದಿದ್ದರೆ ತಾನೂ ಸಹ ತನ್ನ ಶೈಲಿಯನ್ನು ಬದಲಿಸಬೇಕಾಗುತ್ತದೆ ಎಂಬುದಾಗಿ ಶಿವಮೊಗ್ಗ ಕ್ಷೇತ್ರದ ಸಂಸದ, ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಸೋಮಿನಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಬಿಜೆಪಿ ಗೆಲ್ಲಲು 100 ಕೋಟಿ ರುಪಾಯಿ ಖರ್ಚು ಮಾಡಿದೆ. ಹಣ, ಹೆಂಡ ಹಂಚಿದೆ" ಎಂಬ ಬಂಗಾರಪ್ಪರ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿದ್ದಾರೆ.

"ಬಂಗಾರಪ್ಪ ಬಗ್ಗೆ ತನಗೆ ಅಪಾರ ಗೌರವವಿದೆ. ಅವರು ಹಿರಿಯರು ಎನ್ನುವ ಕಾರಣಕ್ಕೆ ಇದುವರೆಗೂ ಗೌರವ ನೀಡುತ್ತಲೇ ಬಂದಿದ್ದೇನೆ. ಚುನಾವಣೆ ವೇಳೆಯಲ್ಲಿ ಕೂಡಾ ಅಪ್ಪಿತಪ್ಪಿಯೂ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲುಗೆಲುವು ಸಹಜ. ಜನತೆಯ ತೀರ್ಪಿಗೆ ತಲೆಬಾಗಬೇಕು. ಸೋತಿರುವ ಅವರು ತನ್ನ ಸೋಲೊಪ್ಪಿಕೊಂಡು ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡಲಿ" ಎಂದು ರಾಘವೇಂದ್ರ ಹೇಳಿದರು.

ಬಂಗಾರಪ್ಪ ಅವರು ಇನ್ನೂಇನ್ನೂ ಹೀಗೆಯೇ ಮಾತಾನಾಡುವುದನ್ನು ಮುಂದುವರಿಸಿದರೆ, ತಾನು ಸಹ ಇದಕ್ಕೆ ತಕ್ಕಂತೆ ಉತ್ತರಿಸಬೇಕಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೆಡ್ಡಿ ಬ್ರದರ್ಸ್ ರಾಜಿ ಓಕೆ, ಶೆಟ್ಟರ್ ಕೋಪ ಯಾಕೆ?
ಪಕ್ಷದ ಸೋಲಿಗೆ ಹೈಕಮಾಂಡ್ ಹೊಣೆ: ಬಂಗಾರಪ್ಪ
ರಾಷ್ಟ್ರೀಯ ಪಕ್ಷಗಳನ್ನು ಮ‌ೂಲೆಗೆ ತಳ್ಳುವೆ: ಕುಮಾರ್
ಬಿಜೆಪಿ ಸರ್ಕಾರದ ದುರಾಡಳಿತ ಎತ್ತಿ ಹಿಡಿಯುವೆ: ಸಿದ್ದು
ಸಿಎಂ ಮೋಸಗಾರ: 'ಚರಂಡಿಯಿಂದ' ಹೊರಬಿದ್ದ ವರ್ತೂರು
ವಿ ಸೋಮಣ್ಣಗಾಗಿ ಕೃಷ್ಣಯ್ಯಶೆಟ್ಟಿ ತಲೆದಂಡ?