ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಹಾಲಿಂಗಂ ಸಾವಿನ ಸುತ್ತ ಅನುಮಾನದ ಹುತ್ತ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾಲಿಂಗಂ ಸಾವಿನ ಸುತ್ತ ಅನುಮಾನದ ಹುತ್ತ?
ಕೈಗಾ ಅಣು ಸ್ಥಾವರ ಘಟಕದ ಎಲ್. ಮಹಾಲಿಂಗಂ ಅವರ ಸಾವಿನ ಪ್ರಕರಣದ ಬಗ್ಗೆ ಇದೀಗ ಕೆಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಎನ್‌ಎ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಮಹಾಲಿಂಗಂ ಅವರು ಕಚೇರಿಯ ಸಹೋದ್ಯೋಗಿಗಳ ಪ್ರಕಾರ ಶಾಂತ ಸ್ವಭಾವ ಮತ್ತು ಸ್ನೇಹ ಜೀವಿಯಾಗಿದ್ದು, ಯಾರ ಜೊತೆ ಹೆಚ್ಚು ಮಾತನಾಡದೆ ತಮ್ಮಷ್ಟಕ್ಕೆ ತಾವು ಇರುತ್ತಿದ್ದರು. ಯಾರ ಜೊತೆ ಕೂಡ ಜಗಳವಾಡುತ್ತಿರಲಿಲ್ಲ ಎಂಬುದಾಗಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಕೈಗಾ ಘಟಕದಲ್ಲಿ ವಿಜ್ಞಾನಿಯಾಗಿದ್ದ ಇವರು ಕೈಗಾ ಘಟಕದಲ್ಲಿ ತರಬೇತಿ ವಿಭಾಗದಲ್ಲಿದ್ದರು. ಆದರೆ ಇವರ ಸಾಂಸಾರಿಕ ಜೀವನ ಕುರಿತಂತೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಮಹಾಲಿಂಗಂ ನಾಪತ್ತೆಯಾಗುವ ಹಿಂದಿನ ದಿನ ತಮ್ಮ ಸಹೋದ್ಯೋಗಿಯೊಬ್ಬರ ಮನೆಯಲ್ಲಿ ಔತಣ ಕೂಟದಲ್ಲೂ ಪಾಲ್ಗೊಂಡಿದ್ದರು.

ಹಲವಾರು ಅನುಮಾನಗಳಿಗೆ ಕಾರಣವಾಗಿರುವ ಮಹಾಲಿಂಗಂ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಮಹಾಲಿಂಗಂ ಪತ್ನಿ ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಾರೆ. ಹಾಗೆ ಮಹಾಲಿಂಗಂ ಅವರು ತಮಿಳುನಾಡಿನ ಕಲ್ಪಕಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕೆಲ ಕಾಲ ನಾಪತ್ತೆಯಾಗಿದ್ದರು ಎಂದು ಹೇಳಲಾಗುತ್ತಿದೆ.

ಮಹಾಲಿಂಗ ಸಾವಿನ ಕುರಿತಂತೆ ಡಿಎನ್ಎ ವರದಿ ಬಂದ ನಂತರ ತನಿಖೆ ಚುರುಕುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್ಎ ವರದಿ ಬಂದ ನಂತರ ಪತ್ತೆಯಾದ ದೇಹ ಮಹಾಲಿಂಗಂ ಅವರದಲ್ಲ ಎಂದರೆ ತನಿಖೆಯನ್ನು ಹೊಸದಾಗಿ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನರಿಗೆ ಅಭಿವೃದ್ಧಿ ಬೇಡ;ಹಣ-ಹೆಂಡವೇ ಮುಖ್ಯ: ಎಚ್‌ಡಿಕೆ
ಕೃಷ್ಣಯ್ಯ ಶೆಟ್ಟಿ ರಾಜೀನಾಮೆ: ಅಭಿಮಾನಿಗಳಿಂದ ಆಕ್ರೋಶ
ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ಎಚ್‌ಡಿಕೆ
ಮತ್ತೆ ಮೂವರಿಗೆ ಎಚ್‌1ಎನ್‌1 ಸೋಂಕು ಶಂಕೆ
ವಿದ್ಯುತ್ ಬಳಕೆದಾರರಿಗೆ 'ದರ ಏರಿಕೆ ಶಾಕ್'
ನಿಗಮ-ಮಂಡಳಿಯೂ ಪುನಾರಚನೆ: ಯಡಿಯೂರಪ್ಪ