ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಳೆಗಾಗಿ 34ಸಾವಿರ ದೇವಸ್ಥಾನಗಳಲ್ಲಿ ಪೂಜೆ: ಸೋಮಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಳೆಗಾಗಿ 34ಸಾವಿರ ದೇವಸ್ಥಾನಗಳಲ್ಲಿ ಪೂಜೆ: ಸೋಮಣ್ಣ
ಪ್ರತಿದಿನ ಬೆಳಿಗ್ಗೆ 6ಗಂಟೆಗೆ ಕಡ್ಡಾಯ ಪೂಜೆ
NRB
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ, ಎಲ್ಲೆಡೆ ಉತ್ತಮ ಮಳೆ, ಬೆಳೆಯಾಗಲಿ ಎಂಬ ನಿಟ್ಟಿನಲ್ಲಿ ಶುಕ್ರವಾರ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 34ಸಾವಿರ ದೇವಸ್ಥಾನಗಳಲ್ಲೂ ಪೂಜೆ ಕೈಂಕರ್ಯ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಮತ್ತು ಮಳೆಗಾಗಿ ಪ್ರಾರ್ಥಿಸಿ ರಾಜ್ಯದ 34ಸಾವಿರ ದೇವಸ್ಥಾನಗಳಲ್ಲೂ ಪ್ರತಿದಿನ ಕಡ್ಡಾಯವಾಗಿ ಬೆಳಿಗ್ಗೆ 6ರಿಂದ ಪೂಜಾ ಕಾರ್ಯ ಆರಂಭಿಸುವಂತೆ ಅರ್ಚಕರಿಗೆ ಸೂಚನೆ ನೀಡಲಾಗಿದೆ ಎಂದರು.

ಕಷ್ಟಕಾಲ ಬಂದಾಗ ದೇವರ ಮೊರೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಇದೀಗ ರಾಜ್ಯದಲ್ಲಿ ಸಕಾಲದಲ್ಲಿ ಮುಂಗಾರು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬರದ ಛಾಯೆ, ವಿದ್ಯುತ್ ಸಮಸ್ಯೆ ತಲೆದೋರುವಂತಾಗಿದೆ. ಆ ನೆಲೆಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಪೂಜಾ ಕೈಂಕರ್ಯ ನಡೆಸುವಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈಸೂರು: ಭುಗಿಲೆದ್ದ ಕೋಮುಗಲಭೆಗೆ ಮೂರು ಬಲಿ
ವ್ಯಕ್ತಿ ಪೂಜೆ ಬೇಡ;ಪಕ್ಷ ಪೂಜೆ ಮಾಡಿ: ಡಿಕೆಶಿ
ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು ಮಳೆ
ಲೋಡ್ ಶೆಡ್ಡಿಂಗ್: ಸರ್ಕಾರಕ್ಕೆ ನೋಟಿಸ್
ರಾಜ್ಯದಲ್ಲಿ 2,300ಮೆ.ವ್ಯಾಟ್ ವಿದ್ಯುತ್ ಕೊರತೆ: ಈಶ್ವರಪ್ಪ
ಪತ್ರಕರ್ತರ ಪರಿಹಾರ ನಿಧಿ ಮೊತ್ತ 1ಕೋಟಿ ರೂ.: ಕಟ್ಟಾ