ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ?
ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸದಾಗಿ 8 ರೈಲುಗಳು ಮಂಜೂರಾಗಿದ್ದು, 4 ರೈಲುಗಳ ಓಡಾಟವನ್ನು ವಿಸ್ತರಿಸಲಾಗಿದೆ ಮತ್ತು ವಾರಕ್ಕೆ ಮೂರು ಬಾರಿ ಓಡುತ್ತಿದ್ದ ಚೆನ್ನೈ-ಮಂಗಳೂರು ರೈಲನ್ನು ದಿನಂಪ್ರತಿಗೆ ಪರಿವರ್ತಿಸಲಾಗಿದೆ. ಕರ್ನಾಟಕಕ್ಕೆ ಏನೇನು ದಕ್ಕಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ:

ರಾಜ್ಯಕ್ಕೆ ಹೊಸದಾಗಿ ಲಭ್ಯವಾದ ರೈಲುಗಳು:

1. ಬೆಂಗಳೂರು - ಹುಬ್ಬಳ್ಳಿ - ಸೋಲಾಪುರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)

2. ಹೌರಾ - ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)

3. ಮುಂಬೈ - ಕಾರವಾರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)

4. ಹಜ್ರತ್ ನಿಜಾಮುದ್ದೀನ್ - ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ವಯಾ ಕಾಚಿಗುಡ (ವಾರಕ್ಕೆ ಮೂರು)

5. ಮೈಸೂರು-ಯಶವಂತಪುರ ಎಕ್ಸ್‌ಪ್ರೆಸ್ (ದೈನಿಕ)

6. ಲಕ್ನೋ - ರಾಯ್‌ಬರೇಲಿ-ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)

7. ಶಿವಮೊಗ್ಗ - ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ದೈನಿಕ)

8. ಬೆಂಗಳೂರು -ಕೋಚುವೇಲಿ ಸೂಪರ್ ಫಾಸ್ಟ್ (ಸಾಪ್ತಾಹಿಕ).

ಕರ್ನಾಟಕಕ್ಕೆ ಸಂಬಂಧಿಸಿ ವಿಸ್ತರಣೆಯಾದ ರೈಲುಗಳು:

ಬೆಂಗಳೂರು-ಮಂಗಳೂರು ದೈನಿಕ ರೈಲು ಕಣ್ಣೂರುವರೆಗೆ

ಮೈಸೂರು-ತಿರುಪತಿ ದೈನಿಕ ರೈಲು ಚಾಮರಾಜ ನಗರಕ್ಕೆ

ಮಂಗಳೂರು-ಚೆನ್ನೈ ಸಾಪ್ತಾಹಿಕ ರೈಲು ಪುದುಚೇರಿವರೆಗೆ

ಬೆಂಗಳೂರು-ಹುಬ್ಬಳ್ಳಿ ಇಂಟರ್‌ಸಿಟಿ ದೈನಿಕ ರೈಲು ಧಾರವಾಡಕ್ಕೆ

ರಾಜ್ಯಕ್ಕೆ ಸಂಬಂಧಿಸಿ ಓಡಾಟ ವಿಸ್ತರಣೆಯಾದ ರೈಲು:

ಚೆನ್ನೈ-ಮಂಗಳೂರು ವಾರಕ್ಕೆ ಮೂರು ದಿನ ಇದ್ದದ್ದು ಪ್ರತಿ ದಿನ ಓಡಲಿದೆ

ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆ:

ಕೊಟ್ಟೂರು-ಹರಿಹರ ಯೋಜನೆ

ಹಳಿ ದ್ವಿಗುಣಗೊಳಿಸುವ ಯೋಜನೆ:

ಯಶವಂತಪುರ-ಯಲಹಂಕ, ಯಲಹಂಕ-ಚೆನ್ನಸಂದ್ರ

ಹೊಸ ಮಾರ್ಗ ನಿರ್ಮಾಣದ ಅಂಗೀಕಾರಕ್ಕೆ ಮಮತಾ ಬ್ಯಾನರ್ಜಿ ಶಿಫಾರಸು ಮಾಡಿರುವ ಪ್ರಸ್ತಾವನೆಗಳು:

ಚಿಕ್ಕಬಳ್ಳಾಪುರ-ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ

ಆಲಮಟ್ಟಿ-ಕೊಪ್ಪಳ

ಯಾದಗಿರ್ - ಶಹಾಪುರ - ಶೋರಾಪುರ - ಮದ್ದೇಬಿಹಾಳ-ಆಲಮಟ್ಟಿ

ಗದಗ-ಹಾವೇರಿ

ಗದಗ-ವಾಡಿ

ಗದಗ-ಹಾವೇರಿ

ಶಿವಮೊಗ್ಗ-ಹರಿಹರ

ಆನೆಕಲ್ ರೋಡ್ - ಬಿಡದಿ

ನಾಂದೇಡ್-ಬೀದರ್

* ಗುಂತಕಲ್-ಗುಟಿ-ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಯೋಜನೆಗೆ ಸರ್ವೇ ನಡೆಸಲಾಗುತ್ತದೆ.

* ಬೆಂಗಳೂರು ನಗರ, ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಮಂಗಳೂರು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುತ್ತದೆ.

* ಆದರ್ಶ ನಿಲ್ದಾಣಗಳನ್ನಾಗಿ ಪರಿವರ್ತಿಸುವ ದೇಶದ ಒಟ್ಟು 375 ನಿಲ್ದಾಣಗಳಲ್ಲಿ ಬೇಲೂರು, ಬೀದರ್, ಶಿವಾಜಿನಗರ, ಸಾಗರ ನಿಲ್ದಾಣಗಳು ಸೇರಿವೆ.

* ಕರ್ನಾಟಕದ ಹುಬ್ಬಳ್ಳಿ, ಮೈಸೂರು ಸಹಿತ ದೇಶದಲ್ಲಿ 49 ರೈಲು ನಿಲ್ದಾಣಗಳಲ್ಲಿ ಶಾಪಿಂಗ್, ಆಹಾರವಸ್ತು, ರೆಸ್ಟೋರೆಂಟ್, ಬುಕ್ ಸ್ಟಾಲ್, ಟೆಲಿಫೋನ್ ಬೂತ್, ಔಷಧ, ಬಜೆಟ್ ಹೋಟೆಲ್‌ಗಳು, ಅಂಡರ್‌ಗ್ರೌಂಡ್ ಪಾರ್ಕಿಂಗ್ ಮುಂತಾದ ವ್ಯವಸ್ಥೆಯುಳ್ಳ ಬಹು ಕಾರ್ಯ ಸಂಕೀರ್ಣಗಳ ಸ್ಥಾಪನೆ.

* ದೀರ್ಘ ದೂರ ಪ್ರಯಾಣಿಸುವ ರೈಲುಗಳಲ್ಲಿ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಕವಾಗಿ ಅಳವಡಿಸುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಉಳಿದವೆಂದರೆ ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತಾ ಮತ್ತು ಭುವನೇಶ್ವರ.

* ಈಗಿರುವ ರೈಲ್ವೇ ಆಸ್ಪತ್ರೆಗಳಿಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಹೊಸದಾಗಿ ಮೆಡಿಕಲ್ ಕಾಲೇಜುಗಳನ್ನು ಸೇರಿಸಲಾಗುತ್ತಿದ್ದು, ಮೈಸೂರಿನ ರೈಲ್ವೇ ಇಲಾಖೆ ನೌಕರರಿಗೂ ಈ ಸೌಲಭ್ಯ ಒದಗಿ ಬರಲಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ದೋಝಪುರ, ಅಹಮದಾಬಾದ್, ನಾಗ್ಪುರ, ಜಮ್ಮು, ತಿರುವನಂತಪುರಂ, ಗುವಾಹಟಿ ಮುಂತಾದ ಸ್ಥಳಗಳಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ.

* ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಸಿಕಂದರಾಬಾದ್ ರೈಲ್ವೇ ಆಸ್ಪತ್ರೆಗಳಲ್ಲಿ ಸುಟ್ಟ ಗಾಯ ಚಿಕಿತ್ಸಾ ಘಟಕಗಳ ಸ್ಥಾಪನೆ.

* ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯು 2007-08ಕ್ಕೆ ಹೋಲಿಸಿದರೆ, 1,96,261 ಗಾಲಿಗಳನ್ನು ಉತ್ಪಾದಿಸುವ ಮೂಲಕ 2008-09ರಲ್ಲಿ ಅದ್ಭುತವಾದ ಶೇ.35 ಏಳಿಗೆ ದಾಖಲಿಸಿದೆ. 20009-10ರ ಉತ್ಪಾದನಾ ಗುರಿ 2,00,000 ಗಾಲಿಗಳು.

ಸಮಗ್ರ ರೈಲ್ವೇ ಬಜೆಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರೆಡ್ಡಿ
ಬಿಬಿಎಂಪಿ ಚುನಾವಣೆ; ಸರ್ಕಾರ ಕೋರ್ಟ್‌ಗೆ ಮೊರೆ
ಮೈಸೂರು ಕೋಮುದಳ್ಳುರಿ: ಮತ್ತೆ ಮೂವರಿಗೆ ಇರಿತ
ಕೆಎಸ್ಸಾರ್ಟಿಸಿ ಮುಖಾಮುಖಿ ಡಿಕ್ಕಿ: ನಾಲ್ವರು ಬಲಿ
ರಾಜ್ಯದಲ್ಲಿ ಶೀಘ್ರವೇ ಸಂಪೂರ್ಣ ಗೋಹತ್ಯೆ ನಿಷೇಧ: ಆಚಾರ್ಯ
ಇನ್ಮುಂದೆ ಸರ್ಕಾರವೇ ಮದ್ಯದಂಗಡಿ ತೆರೆಯುತ್ತೆ: ಕಟ್ಟಾ